ರಾಜ್ಯ
Trending

ಛತ್ರಗಳ ಮುಂಗಡ ಹಣ ವಾಪಸ್ ನೀಡಲು ಆದೇಶ!

ಬೆಂಗಳೂರು: ಕಲ್ಯಾಣ ಮಂಟಪಕ್ಕೆ ನೀಡಲಾಗಿದ್ದ ಮುಂಗಡ  ಹಣವನ್ನು  ಹಿಂದಿರುಗಿಸುವಂತೆ ಮಾಲೀಕರಿಗೆ ಸಚಿವ ಆರ್ ಅಶೋಕ್ ಸೂಚನೆ ನೀಡಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ  ಮದುವೆ ಸೇರಿ ಅನೇಕ  ಕಾರ್ಯಕ್ರಮಗಳು ರದ್ದಾಗಿದ್ದವು. ಆದರೆ ಕಲ್ಯಾಣ ಮಂಟಪಗಳಿಗೆ ನೀಡಿದ್ದ ಅಡ್ವಾನ್ಸ್ ಹಣವನ್ನು ವಾಪಸ್ ಕೊಟ್ಟಿರಲಿಲ್ಲ.  ಈ ಬಗ್ಗೆ ಅನೇಕ ಮಂದಿ, ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆಮಾಡಿ ಸಮಸ್ಯೆ ಹೇಳಿಕೊಂಡಿದ್ದರು.ಸಾಲ ಮಾಡಿ ನೀಡಿದ್ದ ಮುಂಗಡ ಹಣವನ್ನು ದಯಮಾಡಿ ಕಲ್ಯಾಣ ಮಂಟಪಗಳ ಮಾಲೀಕರಿಂದ ವಾಪಸ್ ಕೊಡಿಸಿ ಎಂದು ಮನವಿ ಮಾಡಿದ್ದರು ಇದಕ್ಕೆ ಸ್ಪಂದಿಸಿದ್ದ ಸಚಿವ ಆರ್ ಅಶೋಕ್ ಮುಂಗಡ ಹಣ ವಾಪಸ್ ಮಾಡುವಂತೆ ಮದುವೆ ಛತ್ರದ ಮಾಲೀಕರಿಗೆ ಸುತ್ತೋಲೆ ಹೊರಡಿಸಿರುವುದಾಗಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!