ರಾಜ್ಯ

ಶಿಷ್ಯವರ್ಗದೊಂದಿಗೆ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಭತ್ತದ ನಾಟಿ ಕೃಷಿ ಕೆಲಸ.

ದಕ್ಷಿಣ ಭಾರತದ ಅಯೋಧ್ಯೆ ಎಂದೇ ಖ್ಯಾತಿ ಪಡೆದಿರುವ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಸದ್ಗುರು ಶ್ರೀಶ್ರೀಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಶ್ರೀ ಗುರುದೇವ ಮಠದಲ್ಲಿ ಶಿಷ್ಯವರ್ಗದೊಂದಿಗೆ ಭತ್ತದ ನಾಟಿ ಕೃಷಿ ಕೆಲಸ ನಡೆಸಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವ ಸಲುವಾಗಿ ತಾವೇ ಹೊಲದಲ್ಲಿ ಕೃಷಿಯ ಕೆಲಸ ಮಾಡುವ ಮೂಲಕ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ.

ಬಡ ವಿದ್ಯಾರ್ಥಿಗಳಿಗೆ 1ರಿಂದ 10ನೇ ತರಗತಿವರೆಗೆ ಉಚಿತ ವಸತಿ ಶಿಕ್ಷಣ, ಶಾಲೆಯಲ್ಲಿ ಭಗವದ್ಗೀತೆ ಬೋಧನೆಯಂತಹ ಉತ್ತಮ ಕಾರ್ಯ ನಡೆಸುತ್ತಾ ಬಂದಿದ್ದು ಎಲ್ಲರಿಗೂ ಮಾದರಿಯಾಗಿದ್ದಾರೆ. ಸದಾ ಸಮಾಜಮುಖಿಯಾಗಿ ಚಿಂತನೆ ಮಾಡುವ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯಾಗಿದ್ದು ಸಮಸ್ತ ತುಳುನಾಡಿನ ಹೆಮ್ಮೆ ಎನಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker