
ಬೆಳ್ತಂಗಡಿ, ಜು.17: ಅನಾರೋಗ್ಯಪೀಡಿತ ವಯೋವೃದ್ಧೆ ತಾಯಿಗೆ ಥಳಿಸಿ ಹಿಂಸಿಸಿದ ಆರೋಪದಲ್ಲಿ ಮಗ ಮತ್ತು ಮೊಮ್ಮಗನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿಯ ಸವಣಾಲು ಹಲಸಿನಕಟ್ಟೆ ನಿವಾಸಿ ಅಪ್ಪಿ ಶೆಡ್ತಿಯವರು ಮಗ, ಮೊಮ್ಮಗನಿಂದ ಹಿಂಸೆಗೊಳಗಾದ ಹಿರಿ ಜೀವ. ಹಲ್ಲೆಗೈದು ಹಿಂಸಿಸಿದ ಆರೋಪದಲ್ಲಿ ಅಪ್ಪಿ ಶೆಡ್ತಿಯವರ ಪುತ್ರ ಶ್ರೀನಿವಾಸ ಶೆಟ್ಟಿ ಮತ್ತು ಮೊಮ್ಮಗ ಪ್ರದೀಪ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿರುವ ಅಪ್ಪಿ ಶೆಡ್ತಿಯವರನ್ನು ಮಗ ಹಾಗೂ ಮೊಮ್ಮಗ ಹಿಂಸಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಸ್ ಆಗಿತ್ತು. ಈ ಹಿನ್ನೆಲೆ ಯಲ್ಲಿ ಬೆಳ್ತಂಗಡಿ ಠಾಣಾ ಪೊಲೀಸರು ಘಟಣೆಯ ಬಗ್ಗೆ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. ಇದೀಗ ಆರೋಪಿಗಳನ್ನು ಬಂಧಿಸಿದ್ದು, ಅವರ ವಿರುದ್ಧ ಕಲಂ- 323, 504 IPC ಮತ್ತು 24 ಹಿರಿಯ ನಾಗರಿಕರ ಕಾಯಿದೆ 2007 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.