ಕರಾವಳಿ

ದುರುದ್ದೇಶದ ಅಪಪ್ರಚಾರ ಸಲ್ಲದು : ಕುಯಿಲಾಡಿ ಸುರೇಶ್ ನಾಯಕ್

ಕಳೆದ ಹಲವಾರು ದಿನಗಳಿಂದ ಕೆಲವು ಕಾಂಗ್ರೆಸ್ ನಾಯಕರು ಹಾಗೂ ಸಮಾಜ ಸೇವಕರ ಸೋಗಿನಲ್ಲಿರುವವರು ಬಿಜೆಪಿ ಹಾಗೂ ಸರಕಾರದ ಮೇಲೆ ವ್ರಥಾ ಸುಳ್ಳು ಆರೋಪ ಹೊರಿಸುವ ವ್ಯರ್ಥ ಸಾಹಸದಲ್ಲಿ ತೊಡಗಿದ್ದಾರೆ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ.

ಮರಳು, ಸಿಮೆಂಟ್, ಕೊರೋನಾ ಹಗರಣ ಎಂಬೆಲ್ಲ ಯಾವುದೇ ನಿಗದಿತ ಸಾಕ್ಷ್ಯಗಳಿಲ್ಲದೆ ಕೇವಲ ಪ್ರಚಾರದ ಗೀಳು ಮತ್ತು ದುರುದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಬೊಬ್ಬಿರಿಯುತ್ತಿರುವುದು ಹಾಸ್ಯಾಸ್ಪದವಾಗಿದೆ.

ಉಡುಪಿ ಜಿಲ್ಲೆಯ ಶಾಸಕರುಗಳು ಈಗಾಗಲೇ ಸಂಬಂಧಪಟ್ಟ ವಿಚಾರಗಳ ಬಗ್ಗೆ ಸೂಕ್ತ ಸ್ಪಷ್ಠಿಕರಣವನ್ನು ನೀಡಿದ್ದಾರೆ. ಉಡುಪಿ ಜಿಲ್ಲಾಧಿಕಾರಿಗಳು ಕೂಡ ಯಾವುದೇ ಅಧಾರ ರಹಿತ ಆರೋಪಗಳನ್ನು ಮಾಡುವವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಯಾವುದೇ ಭ್ರಷ್ಟಾಚಾರ ನಡೆದಿದ್ದರೆ ದಾಖಲೆ ಸಮೇತ ಸಂಬಂಧಪಟ್ಟ ತನಿಖಾ ಸಂಸ್ಥೆಗೆ ದೂರು ನೀಡಿ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಸತ್ಯಕ್ಕೆ ದೂರವಾದ ವಿಚಾರಗಳನ್ನು ಪದೇ ಪದೇ ಅಪಪ್ರಚಾರ ಮಾಡಿ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ದುರುದ್ದೇಶ ಉಳ್ಳವರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!