ರಾಷ್ಟ್ರೀಯ
ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ 12 ಕೋಟಿ ರೂ. ಲಾಟರಿ!
ತಿರುವನಂತಪುರಂ : ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನಿಗೆ ಬರೋಬ್ಬರಿ 12 ಕೋಟಿ ರೂ. ಲಾಟರಿ ಹೊಡೆದು ಕೋಟ್ಯಾಧಿಪತಿ ಯಾಗಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.
ಕೊಚ್ಚಿಯ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಅನಂತು ವಿಜಯನ್ ಎಂಬಾತನಿಗೆ ಭಾನುವಾರ ಬೆಳಗ್ಗೆ 12 ಕೋಟಿ ರೂ. ಗಳ ಲಾಟರಿ ಹೊಡೆದಿದ್ದು, ಒಂದೇ ದಿನದಲ್ಲಿ ಅನಂತು ಕೋಟ್ಯಾಧಿಪತಿಯಾಗಿದ್ದಾನೆ.
ಲಾಕ್ ಡೌನ್ ಬಳಿಕ ಅನಂತ ಕೆಲಸ ಕಳೆದುಕೊಂಡು ಸಂಕಷ್ಟದಲ್ಲಿದ್ದ. ಈ ವೇಳೆ ತನ್ನ ಅದೃಷ್ಟ ಪರೀಕ್ಷೆ ಮಾಡಿಸಿಕೊಳ್ಳಲು ನಿರ್ಧರಿಸಿದ ಅನಂತು ಲಾಟರಿ ಟಿಕೆಟ್ ಖರೀದಿಸಿದ್ದ. ನಿನ್ನೆ ಸಂಜೆ 5.30 ಕ್ಕೆ ಲಾಟರಿಯ ಫಲಿತಾಂಶ ಪ್ರಕಟವಾಗಿದ್ದು, ತಾನು ಖರೀದಿಸಿದ ಲಾಟರಿ ಬಹುಮಾನ ಬಂದಿದೆ.