ಯುವಕನ ಮೊಬೈಲ್ ಒಡೆದು ಕಪಾಳಕ್ಕೆ ಬಾರಿಸಿದ ಜಿಲ್ಲಾಧಿಕಾರಿ

ರಾಯ್ಪುರ್: ಲಾಕ್ಡೌನ್ ನಡುವೆ ಕೆಲ ಔಷಧಿಗಳನ್ನು ತರಲು ಮನೆಯಿಂದ ಹೊರಬಂದಿದ್ದ ಯುವಕನ ಮೊಬೈಲ್ ಒಡೆದು ಹಾಕಿದಲ್ಲದೆ, ಕಪಾಳಕ್ಕೂ ಬಾರಿಸಿ, ಜಿಲ್ಲಾಧಿಕಾರಿ ಅಮಾನವೀಯ ವರ್ತಿಸಿದ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ.
ಇಷ್ಟೇ ಅಲ್ಲದೆ, ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ಕರೆದು ಥಳಿಸುವಂತೆ ಹೇಳಿ ಎಫ್ಐಆರ್ ದಾಖಲಿಸಲು ಆದೇಶಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜಿಲ್ಲಾಧಿಕಾರಿಗಳ ನಡೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಈ ಘಟನೆ ಛತ್ತೀಸ್ಗಢದ ಸುರಾಜ್ಪುರ್ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲಾಧಿಕಾರಿ ರಣ್ಬೀರ್ ಶರ್ಮಾ ಯುವಕನ ಮೊಬೈಲ್ ಪಡೆದು ರಸ್ತೆಯ ಮೇಲೆ ಜೋರಾಗಿ ಎಸೆದು ಒಡೆದು ಹಾಕುವುದು ವಿಡಿಯೋದಲ್ಲಿ ದಾಖಲಾಗಿದೆ.
This shameless collector in Chattisgarh not only abused his power but also slapped an innocent boy out on the road during pandemic and slammed his phone on the road. Not only should he be dismissed from service but there should be FIR. @bhupeshbaghelpic.twitter.com/4LyW448kEh
— Aditya Raj Kaul (@AdityaRajKaul) May 22, 2021