
(ಮೇ.27) : ಅಲೋಪಥಿ ಮೂರ್ಖತನದ ಪದ್ಧತಿ ಎಂದಿದ್ದಾರೆಂದು ಬಾಬಾ ರಾಮದೇವ್ ವಿರುದ್ಧ ಉತ್ತರಾಖಂಡ್ನ ಐಎಂಎ ಮಾನಹಾನಿ ನೋಟಿಸ್ ನೀಡಿದ್ದು 15 ದಿನಗಳಲ್ಲಿ ಕ್ಷಮೆ ಕೇಳದೇ ಹೋದಲ್ಲಿ 1000 ಕೋಟಿ ರೂಪಾಯಿ ಮಾನಹಾನಿ ಪರಿಹಾರ ನೀಡಬೇಕು ಎಂದು ಷರತ್ತು ವಿಧಿಸಿದೆ.
ಇದೀಗ ಸೋಶಿಯಲ್ ಮೀಡಿಯಾದಲ್ಲೂ #ArrestRamdev (ರಾಮ್ದೇವ್ರನ್ನ ಬಂಧಿಸಿ) ಹ್ಯಾಶ್ಟ್ಯಾಗ್ ಅಭಿಯಾನ ಪ್ರಾರಂಭವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ರಾಮ್ದೇವ್, ನನ್ನ ಬಂಧಿಸೋದು ಅವರ ಅಪ್ಪನ ಕೈಲಿಂದಲೂ ಸಾಧ್ಯವಿಲ್ಲ ಎಂದು ಸವಾಲೆಸೆದಿದ್ದಾರೆ.
ಬುಧವಾರ ಪ್ರಧಾನಿ ಮೋದಿಗೆ ಪತ್ರವನ್ನ ಬರೆದಿದ್ದ ಭಾರತೀಯ ವೈದ್ಯಕೀಯ ಸಂಘ ಕೋವಿಡ್ ಲಸಿಕೆ ಅಭಿಯಾನದ ವಿರುದ್ಧ ಜನರಲ್ಲಿ ತಪ್ಪು ಮಾಹಿತಿ ಹರಡುತ್ತಿದ್ದಾರೆಂದು ಬಾಬಾ ರಾಮ್ದೇವ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಆಗ್ರಹಿಸಿತ್ತು.