ರಾಷ್ಟ್ರೀಯ

ನನ್ನನ್ನು ಬಂಧಿಸೋಕೆ ಯಾರಪ್ಪನಿಂದಲೂ ಸಾಧ್ಯವಿಲ್ಲ : ಬಾಬಾ ರಾಮ್ ದೇವ್

(ಮೇ.27) : ಅಲೋಪಥಿ ಮೂರ್ಖತನದ ಪದ್ಧತಿ ಎಂದಿದ್ದಾರೆಂದು ಬಾಬಾ ರಾಮದೇವ್​ ವಿರುದ್ಧ ಉತ್ತರಾಖಂಡ್​ನ ಐಎಂಎ ಮಾನಹಾನಿ ನೋಟಿಸ್​ ನೀಡಿದ್ದು 15 ದಿನಗಳಲ್ಲಿ ಕ್ಷಮೆ ಕೇಳದೇ ಹೋದಲ್ಲಿ 1000 ಕೋಟಿ ರೂಪಾಯಿ ಮಾನಹಾನಿ ಪರಿಹಾರ ನೀಡಬೇಕು ಎಂದು ಷರತ್ತು ವಿಧಿಸಿದೆ.‌

ಇದೀಗ ಸೋಶಿಯಲ್ ಮೀಡಿಯಾದಲ್ಲೂ #ArrestRamdev (ರಾಮ್​ದೇವ್​ರನ್ನ ಬಂಧಿಸಿ) ಹ್ಯಾಶ್​ಟ್ಯಾಗ್​​ ಅಭಿಯಾನ ಪ್ರಾರಂಭವಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ವಿರುದ್ಧ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ರಾಮ್​ದೇವ್, ​ನನ್ನ ಬಂಧಿಸೋದು ಅವರ ಅಪ್ಪನ ಕೈಲಿಂದಲೂ ಸಾಧ್ಯವಿಲ್ಲ ಎಂದು ಸವಾಲೆಸೆದಿದ್ದಾರೆ.

ಬುಧವಾರ ಪ್ರಧಾನಿ ಮೋದಿಗೆ ಪತ್ರವನ್ನ ಬರೆದಿದ್ದ ಭಾರತೀಯ ವೈದ್ಯಕೀಯ ಸಂಘ ಕೋವಿಡ್​ ಲಸಿಕೆ ಅಭಿಯಾನದ ವಿರುದ್ಧ ಜನರಲ್ಲಿ ತಪ್ಪು ಮಾಹಿತಿ ಹರಡುತ್ತಿದ್ದಾರೆಂದು ಬಾಬಾ ರಾಮ್​ದೇವ್​ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಆಗ್ರಹಿಸಿತ್ತು.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker