
ಕಾರ್ಕಳ : ಕಾರ್ಕಳ ಉಪವಿಭಾಗದ ಡಿವೈಎಸ್ಪಿಯಾಗಿ ಎಸ್. ವಿಜಯ ಪ್ರಸಾದ್ ಅವರು ಜೂ. 5ರಂದು ಅಧಿಕಾರ ಸ್ವೀಕರಿಸಿದರು. ಉಡುಪಿ ತಾಲೂಕು ಸಾಲಿಗ್ರಾಮದ ವಿಜಯ ಪ್ರಸಾದ್ ಅವರು ಈ ಹಿಂದೆ ಮಡಿಕೇರಿ, ಚಿಕ್ಕಮಗಳೂರಿನಲ್ಲಿ ಎಸ್ಐ ಆಗಿ ಬಳಿಕ ಕಾರ್ಕಳ, ಉತ್ತರ ಕನ್ನಡದಲ್ಲಿ ವೃತ್ತ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು.
ಅನಂತರ ಕರ್ನಾಟಕ ಲೋಕಾಯುಕ್ತ ಮಂಗಳೂರು ಘಟಕದಲ್ಲಿ ಇನ್ಸ್ಪೆಕ್ಟರ್ ಆಗಿದ್ದ ಅವರು ಡಿವೈಎಸ್ಪಿಯಾಗಿ ಭಡ್ತಿಗೊಂಡು ಇದೀಗ ಕಾರ್ಕಳ ವರ್ಗಾವಣೆಯಾಗಿರುತ್ತಾರೆ.