ರಾಜ್ಯ

ಕೋರೋನಾ 3 ನೆಯ ಪ್ಯಾಕೇಜ್ ಘೋಷಣೆ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದೇನು ?!

ಮುಖ್ಯಮಂತ್ರಿ ಯಡಿಯೂರಪ್ಪನವರು ಕೋರೋನಾ ಮೂರನೆಯ ಪ್ಯಾಕೇಜನ್ನು ಘೋಷಿಸಿದ್ದಾರೆ.

ಬಿಪಿಎಲ್ ಕುಟುಂಬಗಳಿಗೆ, ಕೋರೋನಾದಿಂದ ಮೃತಪಟ್ಟ ಕುಟುಂಬಗಳಿಗೆ ಒಂದು ಲಕ್ಷ ಪರಿಹಾರ ಘೋಷಿಸಿದ್ದಾರೆ ಮುಖ್ಯಮಂತ್ರಿ ಯಡಿಯೂರಪ್ಪನವರು. ವಿರೋಧ ಪಕ್ಷಗಳು ಸೇರಿದಂತೆ ಹಲವು ಕಡೆಗಳಿಂದ ಬಡ ಕುಟುಂಬಗಳಿಗೆ ಪರಿಹಾರ ಘೋಷಿಸಬೇಕು ಎಂದು ಒತ್ತಾಯ ಕೇಳಿಬಂದಿತ್ತು. ಇದೀಗ ಕರ್ನಾಟಕದ ಸರಕಾರ ಈ ಬಗ್ಗೆ ಪೂರಕವಾಗಿ ಸ್ಪಂದಿಸಿದೆ.

ಒಂದು ಕುಟುಂಬದಲ್ಲಿ ಓರ್ವ ಸೋಂಕಿತ ಮತ್ತು ಮೃತ ವ್ಯಕ್ತಿಗೆ ಮಾತ್ರ ಒಂದು ಲಕ್ಷ ರೂಪಾಯಿ ಪರಿಹಾರ ಸಿಗಲಿದೆ. ಒಂದು ವೇಳೆ ಆ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಕೋರೋನಾ ಸೋಂಕಿನಿಂದ ಮೃತಪಟ್ಟಿದ್ದರೆ, ಇಬ್ಬರಿಗೆ ಈ ಸೌಲಭ್ಯ ಸಿಗುವುದಿಲ್ಲ. ಒಟ್ಟು 1 ಲಕ್ಷ ರೂಪಾಯಿ ಮಾತ್ರ ಸಿಗುತ್ತದೆ.

ಸರಕಾರ ಈಗಾಗಲೇ ಒಟ್ಟು 30,000 ಕೊರೊನಾ ಸೋಂಕಿತ ಬಡವರನ್ನು ಗುರುತಿಸಿದ್ದು ಅವರಿಗೆ ಇದರ ಲಾಭ ಆಗಲಿದೆ. ಒಂದು ವೇಳೆ ಈ ಬಿಪಿಎಲ್ ಕುಟುಂಬದಲ್ಲಿ ಅಪ್ರಾಪ್ತರು ಮೃತಪಟ್ಟಿದ್ದರೆ ಅವರಿಗೆ ಈ ಸೌಲಭ್ಯ ಸಿಗುವುದಿಲ್ಲ. ಕೇವಲ ವಯಸ್ಕರಿಗೆ ಮಾತ್ರ ಈ ಒಂದು ಲಕ್ಷ ರೂಪಾಯಿಗಳ ಪರಿಹಾರ ದೊರೆಯಲಿದೆ.

ಸರಕಾರವು ಇದಕ್ಕಾಗಿ 250 ರಿಂದ 300 ಕೋಟಿ ರೂಪಾಯಿಗಳನ್ನು ವ್ಯಯ ಮಾಡಲಿದೆ. ಕರ್ನಾಟಕ ಸರಕಾರ ಕೊಡಮಾಡುತ್ತಿರುವ ಮೂರನೆಯ ಪ್ಯಾಕೇಜ್ ಇದಾಗಿದ್ದು ಇದೇ ಕೋರೋನಾ ಎರಡನೆಯ ಅಲೆಯ ನಂತರದ ಅಂತಿಮ ಪ್ಯಾಕೇಜ್ ಎನ್ನಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!