ತಾಜಾ ಸುದ್ದಿಗಳುರಾಜ್ಯ

ಕೋಟ್ಯಾಧೀಶನ ಪುತ್ರ ; ಮಂಗಳಮುಖಿಯಾಗಿ ಬದಲಾದ..!!

ತೆಲಂಗಾಣ : ಕೋಟಿ ಆಸ್ತಿ ಹೊಂದಿದ್ದ ಯುವಕನೊಬ್ಬ ಮಂಗಳಮುಖಿಯಾಗಿ ಬದಲಾಗಿರುವ ಘಟನೆ ಇಲ್ಲಿನ ವೇಮುಲವಾಡದಲ್ಲಿ ನಡೆದಿದೆ.

ಪೆದ್ದಪಲ್ಲಿ ಜಿಲ್ಲೆಯ ಮುಂಜಪಲ್ಲಿ ಗ್ರಾಮದ ವಂಗ ಮಹೇಶ್ ಎಂಬ ಯುವಕ ಕಳೆದೆರಡು ತಿಂಗಳಿನಿಂದ ನಾಪತ್ತೆಯಾಗಿದ್ದ. ಹೀಗಾಗಿ, ಕುಟುಂಬಸ್ಥರು ಮಹೇಶ್​ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಅಷ್ಟರಲ್ಲೇ ಮಹೇಶ್​ ರಾಜನ್ನ ಸಿರಿಸಿಲ್ಲ ಜಿಲ್ಲೆಯ ವೇಮುಲವಾಡದಲ್ಲಿ ಇರುವುದು ಆತನ ಪೋಷಕರಿಗೆ ತಿಳಿದಿದೆ. ಕೂಡಲೇ ಪೋಷಕರು ಮಹೇಶ್​ ನೋಡಲು ತೆರಳಿದ್ರು. ಪ್ಯಾಂಟ್​, ಶರ್ಟ್​ ಹಾಕಿಕೊಂಡು ಸ್ಮಾರ್ಟ್​ ಆಗಿ ಕಾಣಿಸುತ್ತಿದ್ದ ಮಹೇಶ್​, ಏಕಾಏಕಿ ಮಂಗಳಮುಖಿಯಾಗಿ ಕಾಣಿಸಿದ್ದಾನೆ.

ಮಹೇಶ್​ಗೆ ನಮ್ಮ ಜೊತೆ ಬರುವಂತೆ ಬಂಧುಗಳು, ಸ್ನೇಹಿತರು ಮತ್ತು ಪೋಷಕರು ಹೇಳಿದ್ದಾರೆ. ಆದ್ರೆ, ಮಹೇಶ್​ ಇದಕ್ಕೆ ನಿರಾಕರಿಸಿದ್ದಾನೆ. ಹೀಗಾಗಿ, ಮಹೇಶ್​ ಮೇಲೆ ಸಿಡಿಮಿಡಿಗೊಂಡ ಪೋಷಕರು ರಸ್ತೆ ಮಧ್ಯೆದಲ್ಲೇ ಎಲ್ಲರೂ ನೋಡು-ನೋಡುತ್ತಿದ್ದಂತೆ ಹಿಗ್ಗಾಮುಗ್ಗಾ ಥಳಿಸಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ನಮಗೆ 20 ಎಕರೆ ಭೂಮಿ ಇದೆ. ಅವನಿಗೆ ಕೋಟ್ಯಾಂತರ ರೂಪಾಯಿ ಆಸ್ತಿ ಇದೆ ಎಂದು ಮಹೇಶ್​ ಪೋಷಕರು ಕಣ್ಣೀರು ಹಾಕಿದ್ದಾರೆ

Related Articles

Leave a Reply

Your email address will not be published. Required fields are marked *

Back to top button
error: Content is protected !!