ಕರಾವಳಿ

ಶ್ರೆದ್ಧೆ, ಸೇವೆ ಅನುಭವಗಳ ಸಂಘಟನೆ ರೋಟರಿ: ಅಭಿನಂದನ್ ಶೆಟ್ಟಿ

ಮಣಿಪಾಲ: ರೋಟರಿ ಪರಸ್ಪರ ಪ್ರೀತಿ ಗೌರವವನ್ನು ಕೊಡುತ್ತಾ, ಸಂತ್ರಸ್ತ ಪ್ರಪಂಚಕ್ಕೆ ಸೇವೆಯನ್ನು ನೀಡುವ, ಅನುಭವಗಳ ಮೇಲೆ ಸದಸ್ಯರನ್ನು ಸಮಾಜಕ್ಕೆ ಸಿದ್ಧಪಡಿಸುವ ಸಂಘಟನೆಯಾಗಿದೆ ಎಂದು ಅಭಿನಂದನ್ ಶೆಟ್ಟಿಯವರು ನುಡಿದರು.

 

ರೋಟರಿ ಜಿಲ್ಲಾ 3182 ಇದರ ಅತ್ಯಂತ ಬ್ರಹತ್ತ್ ಮಟ್ಟದ ಅಂತರಾಷ್ಟ್ರೀಯ ಅನುದಾನದಿಂದ ಮಾಹೆ ರೋಟರಿ ಸ್ಕಿನ್ ಬ್ಯಾಂಕ್ ಸಮಾಜಕ್ಕೆ ರೋಟರಿ ಕ್ಲಬ್ ಮಣಿಪಾಲ ಟೌನ್ ಇದರ ನೇತ್ರತ್ವದಲ್ಲಿ ಆಗುತ್ತಿರುವುದು ಶ್ಲಾಘನೀಯವಾದದ್ದು ಎಂದು ಅವರು ಹೇಳಿದರು.

ಮಣಿಪಾಲ ಟೌನ್ ಇದರ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಕಾರ್ಯಕ್ರಮದಲ್ಲಿ ಅಧ್ಯಕ್ಷ ಗಣೇಶ್ ನಾಯಕ್, ಕಾರ್ಯದರ್ಶಿಯಾಗಿ ಪ್ರವೀನ್ ಹೂಗಾರ್ ಇವರ ನೂತನ ತಂಡಕ್ಕೆ ಅಧಿಕಾರವನ್ನು ನೀಡಲಾಯಿತು.

ವಿಶೇಷ ಅಭ್ಯಾಗತರಾಗಿ ಸುರೇಶ್ ಶೆಣೈ ಮತ್ತು ಮಾಹೆ ಎಸ್ಟೇಟ್ ಅಧಿಕಾರಿ ಕೆ. ಜೈವಿಠ್ಠಲ್ ಮತ್ತು ವಲಯ ಸೇನಾನಿ ಸಚ್ಚಿದಾನಂದ ನಾಯಕ್ ಅವರು ಭಾಗವಹಿಸಿದ್ದರು.

ಹಾಲಿ ಅಧ್ಯಕ್ಷ ಡಾ. ರವೀಂದ್ರನಾಥ ನಾಯಕ್ ಮತ್ತು ಕಾರ್ಯದರ್ಶಿ ಜ್ಯೋತಿ ರವಿಂದ್ರನಾಥ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಕಿನ್ ಬ್ಯಾಂಕಿಗೆ ಜಿಲ್ಲಾ ಮಟ್ಟದಲ್ಲಿ ರೂ.15 ಲಕ್ಷಗಳ ಸಹಾಯ ಮಾಡಿದ ಅಭಿನಂಧನ ಶೆಟ್ಟಿಯವರನ್ನು ಸನ್ಮಾನಿಸಲಯಿತು. ಡಾ. ಗುರುಮೂರ್ತಿ ಸಂಗಮ್ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker