ಕರಾವಳಿ

ನಾರಾಯಣ ಗುರು ಜಯಂತಿ ಸಾರ್ವತ್ರಿಕ ಆಚರಣೆಗೆ ಅನುಮತಿ‌ ನೀಡುವಂತೆ ಉಡುಪಿ ಬಿಲ್ಲವ ಯುವ ವೇದಿಕೆ ಮನವಿ

ನೂತನ ಸಚಿವರಿಗೆ ಅಭಿನಂದನೆ ಹಾಗೂ ನಾರಾಯಣ ಗುರು ಜಯಂತಿ ಸಾರ್ವತ್ರಿಕ ಆಚರಣೆಗೆ ಅನುಮತಿ‌ ನೀಡುವಂತೆ ಮನವಿ

ನೂತನ ಸಚಿವರಾದ ಮಾನ್ಯ ಸುನಿಲ್ ಕುಮಾರ್‌ರವರು ಇಂದು ಬನ್ನಂಜೆ ಬಿಲ್ಲವ ಸೇವಾ ಸಂಘದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ಭೇಟಿ ನೀಡಿದ್ದು ಈ ಸಂದರ್ಭದಲ್ಲಿ ಹೃತ್ಪೂರ್ವಕವಾಗಿ ಅಭಿನಂದಿಸಲಾಯಿತು.ಅದೇ ರೀತಿ ಪ್ರಸ್ತುತ ಸಾಲಿನಲ್ಲಿ ಕೋವಿಡ್ ಕಾರಣದಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯ ಆಚರಣೆಗೆ ನಿಷೇಧ ವಿಧಿಸುವುದು ಬೇಡ.ಸರಳ ಆಚರಣೆಗೆ ಸರ್ಕಾರಿ ಮಟ್ಟದಲ್ಲಿ ಅನುಮತಿ ದೊರಕಿಸಬೇಕೆಂದು ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷರಾದ ಪ್ರವೀಣ್ ಎಂ ಪೂಜಾರಿ, ಗೌರವಾಧ್ಯಕ್ಷರಾದ ದಿವಾಕರ ಸನಿಲ್ ,ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಕಲ್ಮಾಡಿ,ಉಪಾಧ್ಯಕ್ಷರಾದ ಮಹೇಶ್ ಕುಮಾರ್, ವಿಶು ಕುಮಾರ್, ವಿಜಯ ಕೋಟ್ಯಾನ್ ‌ಮತ್ತು ಪ್ರವೀಣ್ ಸಾಲ್ಯಾನ್ ಜಾನಪದ ಸಾಹಿತಿ ಬನ್ನಂಜೆ ಬಾಬು ಅಮೀನ್, ಬನ್ನಂಜೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾದ ಆನಂದ ಪೂಜಾರಿ,ಪ್ರಧಾನ ಕಾರ್ಯದರ್ಶಿ ಮಾಧವ ಬನ್ನಂಜೆ ಹಾಗೂ ಪದಾಧಿಕಾರಿಗಳು ,ಸಮಾಜದ ಪ್ರಮುಖರು, ಹಿರಿಯರು ಹಾಗು ಸಮಾಜ ಭಾಂಧವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker