ಕರಾವಳಿ

ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತರಿಗೆ ಸನ್ಮಾನ

ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಮಂಗಳೂರು ಶಾಖೆಯ ವತಿಯಿಂದ ಮಂಗಳೂರಿನ ಆದಾಯ ತೆರಿಗೆ ಇಲಾಖೆಯ ಅಡಿಷನಲ್ ಕಮಿಷನರ್ ಆಫ್ ಇನ್ಕಮ್ ಟ್ಯಾಕ್ಸ್ ರೇಂಜ್ ೧ ಆಗಿರುವ ಶ್ರೀ ಕೆ ಎ ಚಂದ್ರಕುಮಾರ್ ಹಾಗು ಅಡಿಷನಲ್ ಕಮಿಷನರ್ REFAC ವೆರಿಫಿಕೇಷನ್ ಯುನಿಟ್ ಶ್ರೀ ಪಿ ಸುರೇಶ್ ರಾವ್ ಇವರಿಗೆ ಹೂಗುಚ್ಛ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕೆ ಎ ಚಂದ್ರಕುಮಾರ್ – ಲೆಕ್ಕಪರಿಶೋಧಕುರು, ಆದಾಯ ತೆರಿಗೆ ಇಲಾಖೆ ಹಾಗು ತೆರಿಗೆ ಪಾವತಿದಾರ ನಡುವಿನ ಕೊಂಡಿಯಂತೆ ಕಾರ್ಯ ನಿರ್ವಹಿಸುತ್ತಾರೆ. ಸಮಾಜಕ್ಕೆ ಅವರ ಕೊಡುಗೆ ಅಪೂರ್ವ ಎಂದು ತಿಳಿಸಿದರು. ಶ್ರೀ ಪಿ ಸುರೇಶ್ ರಾವ್ ರವರು ಮಾತನಾಡಿ ಇಂದಿನ ದಿನಗಳಲ್ಲಿ ಆದಾಯ ತೆರಿಗೆ ಫೇಸ್ ಲೆಸ್ ಆಗಿದೆ. ಎಲ್ಲಾ ತೆರಿಗೆ ವಿಚಾರಗಳು ಆನ್ಲೈನ್ ಮೂಲಕ ರವಾನೆ ಆಗುತ್ತಿವೆ. ಲೆಕ್ಕಪರಿಶೋಧಕರು, ಈ ನಿಟ್ಟಿನಲ್ಲಿ ತೆರಿಗೆ ಪಾವತಿದಾರರಿಗೆ ತಮ್ಮ ಸಹಾಯ ನೀಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಐಸಿಎಐ ನ ಮಂಗಳೂರು ಶಾಖೆಯ ಅಧ್ಯಕ್ಷರಾದ ಸಿಎ ಕೆ ಎಸ ಕಾಮತ್ , ನಿಕಟಪೂರ್ವ ಅಧ್ಯಕ್ಷರಾದ ಸಿಎ ಎಸ್ ಎಸ್ ನಾಯಕ್ ಹಾಗು ಕಾರ್ಯದರ್ಶಿ ಸಿಎ ಪ್ರಸನ್ನ ಶೆಣೈ ಉಪಸ್ಥಿತರಿದ್ದರು.

ಐಸಿಎಐ ಮಂಗಳೂರು ಶಾಖೆಯು ಕರ್ನಾಟಕ ರಾಜ್ಯದ ಎರಡೆನೆಯ ಅತೀ ದೊಡ್ಡ ಶಾಖೆಯಾಗಿ ಹೊರಹೊಮ್ಮಿದೆ ಹಾಗೂ ಅನೇಕ ಜನಪರ ಕಾರ್ಯಕ್ರ್ರಮಗಳನ್ನು ನೀಡುತ್ತಾ ಬಂದಿದೆ. ಮಂಗಳೂರು ಶಾಖೆ ಇತ್ತೀಚೆಗೆ ತನ್ನ ಸುವರ್ಣ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದೆ ಎಂದು ನಿಕಟ ಪೂರ್ವ ಅಧ್ಯಕ್ಷ ಸಿ ಎ ಎಸ್ ಎಸ್ ನಾಯಕ್ ಹೇಳಿದರು

Related Articles

Leave a Reply

Your email address will not be published. Required fields are marked *

Back to top button
error: Content is protected !!