ಕರಾವಳಿ

ಬೆಂದೂರುವೆಲ್ ವಾಣಿಜ್ಯ ಕಟ್ಟಡದಲ್ಲಿ ಅಗ್ನಿ ಆಕಸ್ಮಿಕ: ಅಪಾರ ಹಾನಿ..!

ಮಂಗಳೂರು : ನಗರದ ಬೆಂದೂರುವೆಲ್‌ ನ ಪ್ಯಾರಾಮೌಂಟ್ ಕಟ್ಟಡದಲ್ಲಿರುವ ಎಲ್‌ಜಿ ಶೋ ರೂಂನಲ್ಲಿ ಅಗ್ನಿ ಆಕಸ್ಮಿಕವಾಗಿ ಸಂಭವಿಸಿದ್ದು, ಅಪಾರ ನಷ್ಟ ಸಂಭವಿಸಿದೆ.

ಇಲ್ಲಿ ಅಕ್ಕಪಕ್ಕದಲ್ಲಿ ಹಲವು ಕಟ್ಟಡಗಳಿದ್ದು, ಅಗ್ನಿ ಆಕಸ್ಮಿಕದಿಂದಾಗಿ ಅವರು ಆತಂಕವನ್ನು ಎದುರಿಸಬೇಕಾಯಿತು. ಬೆಂಕಿ ಹಿಡಿಯಲು ಶಾರ್ಟ್‌ ಸರ್ಕ್ಯೂಟ್‌ ಕಾರಣ ಎಂದು ಹೇಳಲಾಗಿದೆ.

ಗಣೇಶ್ ಪ್ರಭು ಮಾಲಕತ್ವದ ಭುವನೇಂದ್ರ ಎಂಟರ್‌ ಪ್ರೈಸಸ್‌ನ ಎಲ್‌ ಶೋರೂಂ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಅಪಾರ ಮೌಲ್ಯದ ವಿದ್ಯುತ್ ಪರಿಕರಗಳು ಸೇರಿದಂತೆ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ.

ಅಂಗಡಿ ಮಾಲಕರು ಇಂದು ಬೆಳಿಗ್ಗೆ ಶೋರೂಂನ ಬಾಗಿಲು ತೆರೆಯಲು ಬಂದ ವೇಳೆ ಈ ಅನಾಹುತವಾಗಿದ್ದು, ಬಾಗಿಲು ತೆರೆಯುತ್ತಿದ್ದಂತೆ ಮತ್ತೆ ಭಾರೀ ಬೆಂಕಿ , ಹೊಗೆ ಆವರಿಸಿದೆ.

ಸ್ಥಳೀಯರು ಕೂಡಲೇ ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿ ತಿಳಿಸಿದ್ದಾರೆ. ಈ ಮೂಲಕ ಹೆಚ್ಚಿನ ಹಾನಿಯನ್ನು ತಪ್ಪಿಸಿದ್ದಾರೆ. ಪಾಂಡೇಶ್ವರ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!