ಕರಾವಳಿ
ಅವ್ಯಾನ್ 2021″ 18ನೇ ಸಿ.ಎ. ಸ್ಟುಡೆಂಟ್ ಕಾನ್ಫರೆನ್ಸ್ ಉದ್ಘಾಟನೆ

ಉಡುಪಿ ಬ್ರಾಂಚ್ ಆಫ್ ಎಸ್.ಐ.ಆರ್.ಸಿ.ಆಫ್ ಐ.ಸಿ. ಎ.ಐ. ಮತ್ತು ಉಡುಪಿ ಬ್ರಾಂಚ್ ಆಫ್ ಎಸ್.ಐ.ಸಿ.ಎ.ಎಸ್.ಎ. ವತಿಯಿಂದ ನಡೆಯುತ್ತಿರುವ “ಅವ್ಯಾನ್ 2021” 18ನೇ ಸಿ.ಎ. ಸ್ಟುಡೆಂಟ್ ಕಾನ್ಫರೆನ್ಸ್ ದಿನಾಂಕ 30-10-2021 ರಂದು ಶಾಸಕರಾದ ಶ್ರೀ ಕೆ ರಘುಪತಿ ಭಟ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉಡುಪಿ ಬ್ರಾಂಚ್ ಆಫ್ ಎಸ್.ಐ.ಆರ್.ಸಿ ಆಫ್ ಐ.ಸಿ. ಎ.ಐ ಅಧ್ಯಕ್ಷರಾದ ಕವಿತಾ ಎಂ. ಪೈ, ಉಪಾಧ್ಯಕ್ಷರಾದ ಲೋಕೇಶ್ ಶೆಟ್ಟಿ, ಕಾರ್ಯದರ್ಶಿಗಳಾದ ಪ್ರದೀಪ್ ಜೋಗಿ, ಕೋಶಾಧಿಕಾರಿಗಳಾದ ಪ್ರಭಾಕರ್ ಎನ್ ನಾಯಕ್, ಎಸ್.ಐ.ಸಿ.ಎ.ಎಸ್.ಎ ಅಧ್ಯಕ್ಷರಾದ ನರಸಿಂಹ ನಾಯಕ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.