ಜೆಸಿಐ ಭಾರತದ ವಲಯ ಹದಿನೈದರ ” ಸಾಧನಾ ಶ್ರೀ ” ಪ್ರಶಸ್ತಿ ಪುರಸ್ಕೃತ ಯಶಸ್ವಿ ಉದ್ಯಮಿ ಜೆಸಿ ಎಂ ಎನ್ ನಾಯಕ್

ಜೆಸಿಐ ಕುಂದಾಪುರ ಸಿಟಿ ಘಟಕದ ಆಥಿತ್ಯದಲ್ಲಿ ನವೆಂಬರ್ 7, 2021ನೇ ಭಾನುವಾರ ಕುಂದಾಪುರದ ಸಹನಾ ಕನ್ವೆನ್ಶನ್ ಹಾಲ್ ನಲ್ಲಿ ನಡೆದ ಜೆಸಿಐ ವಲಯ ಹದಿನೈದರ ವ್ಯವಹಾರ ಸಮ್ಮೇಳನ ” ಉನ್ನತಿ “2021 ರಲ್ಲಿ
ಜೆಸಿಐ ಉಡುಪಿ ಇಂದ್ರಾಳಿ ಘಟಕದ ನಿಕಟ ಪೂರ್ವ ಅಧ್ಯಕ್ಷ ಹಾಗೂ ಜೆಸಿಐ ವಲಯ ಹದಿನೈದರ ವಲಯಾಧಿಕಾರಿ ಉಡುಪಿಯ ಎಲೆಕ್ಟ್ರೋ ಪವರ್ ಕಂಟ್ರೋಲ್ಸ್ ಎಲೆಕ್ಟ್ರಿಕಲ್ ಪ್ಯಾನೆಲ್ ಬೋರ್ಡ್ ತಯಾರಿಕಾ ಸಂಸ್ಥೆಯ ಮಾಲಕರೂ ಆಗಿರುವ ಜೆಸಿ ಎಂ ಎನ್ ನಾಯಕ್ (ಜೆಸಿ ಎಮ್.ವಿ. ನಾಗೇಶ್ ಕುಮಾರ್ )ಇವರು ವ್ಯವಹಾರ ಕ್ಷೇತ್ರದಲ್ಲಿ ಮಾಡಿದ ವಿಶೇಷ ಸಾಧನೆಯನ್ನು ಗುರುತಿಸಿ ವಲಯದ ಪ್ರತಿಷ್ಠಿತ ವ್ಯವಹಾರ ಕ್ಷೇತ್ರದ ವಿಶೇಷ ಸಾಧಕರಿಗೆ ನೀಡುವ ಸಾಧನಾ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಲಯದ ಪ್ರಪ್ರಥಮ ಮಹಿಳಾ ವಲಯಾಧ್ಯಕ್ಷೆ ಜೆಸಿಐ ಪಿ ಪಿ ಪಿ ಸೌಜನ್ಯ ಹೆಗ್ಡೆ , ಜೆಸಿಐ ಭಾರತದ ನಿರ್ದೇಶಕರು ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗ ಹಾಗೂ ನಿಕಟ ಪೂರ್ವ ವಲಯಾಧ್ಯಕ್ಷ ಜೆಸಿಐ ಪಿ ಪಿ ಪಿ ಕಾರ್ತಿಕೇಯ ಮಧ್ಯಸ್ಥ,ವಲಯ ಉಪಾಧ್ಯಕ್ಷ ರಿಜಿಯನ್ ಎ ಜೆಸಿ ದೇವರಾಯ ದೇವಾಡಿಗ, ವಲಯ ನಿರ್ದೇಶಕರು ಮ್ಯಾನೇಜ್ಮೆಂಟ್ ವಿಭಾಗ ಜೆಸಿಐ ಸೇನೆಟರ್ ಲೋಕೇಶ್ ರೈ, ವಲಯ ಸಂಯೋಜಕರಾದ ಜೆಸಿ ಪ್ರಿನ್ಸ್ ಪಿಂಟೋ, ಜೆಸಿ ಸುನೀತಾ ಹೆಗ್ಡೆ, ಜೆಸಿ ಅನಿಲ್ ಶೆಟ್ಟಿ ವಲಯದ ಹಿರಿಯರು ಮತ್ತು ಪೂರ್ವ ಅಧ್ಯಕ್ಷರು, ವ್ಯವಹಾರ ನಿರ್ದೇಶಕ ಹಾಗೂ ಕಾರ್ಯಕ್ರಮದ ಸಭಾಧ್ಯಕ್ಷ ಜೆಸಿ ಸಮದ್ ಖಾನ್, ಆತಿಥೆಯ ಘಟಕದ ಅಧ್ಯಕ್ಷ ಜೆಸಿ ವಿಜಯ ಭಂಡಾರಿ, ಸ್ಥಾಪಕ ಅಧ್ಯಕ್ಷ ಜೆಸಿ ಹುಸೈನ್ ಹೈಕಾಡಿ ಹಾಗೂ ಜೆಸಿಐ ಉಡುಪಿ ಇಂದ್ರಾಳಿ ಡ್ಯಾಷಿಂಗ್ ಘಟಕಾಧ್ಯಕ್ಷೆ ಜೆಸಿ ಜ್ಯೋತಿ ಪ್ರಶಾಂತ್ ಘಟಕದ ಸ್ಥಾಪಕರು ಮತ್ತು ಪೂರ್ವ ವಲಯಾಧಿಕಾರಿ ಜೆ ಎಫ್ ಪಿ ಮನೋಜ್ ಕಡಬ, ಘಟಕದ ಸ್ಥಾಪಕ ಅಧ್ಯಕ್ಷೆ ಜೆ ಎಫ್ ಎಂ ಶೆರ್ಲಿ ಮನೋಜ್ , ಹಾಗೂ ಘಟಕದ ಉಪಾಧ್ಯಕ್ಷೆ ಜೆಸಿ ವೀಣಾ ನಾಗೇಶ್, ಜೆಜೆಸಿ ಪಂಚಮಿ ಹಾಗೂ ಘಟಕದ ಜೆಸಿ ಮತ್ತು ಜೆಸಿಯೇತರ ವಿಶೇಷ ಆವ್ಹಾನಿತರು ಉಪಸ್ಥಿತರಿದ್ದರು.