ಮಣಿಪಾಲ – ಪೆರಂಪಳ್ಳಿ – ಅಂಬಾಗಿಲು ರಸ್ತೆ ಅಗಲೀಕರಣ – ತೋಟಗಾರಿಕಾ ಮರಗಿಡಗಳನ್ನು ಕಳೆದುಕೊಂಡವರಿಗೆ ಪರಿಹಾರ ಧನ ವಿತರಣೆ

ಮಣಿಪಾಲ – ಪೆರಂಪಳ್ಳಿ – ಅಂಬಾಗಿಲು ರಸ್ತೆ ಅಗಲೀಕರಣಗೊಳಿಸಲು ಟಿ.ಡಿ.ಆರ್. ಪ್ರಕ್ರಿಯೆ ಮೂಲಕ ಭೂಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ರಸ್ತೆ ಅಗಲೀಕರಣ ಸಂದರ್ಭದಲ್ಲಿ ಕಟ್ಟಡ ಹಾಗೂ ತೆಂಗು, ಅಡಿಕೆ ಸೇರಿದಂತೆ ತೋಟಗಾರಿಕಾ ಮರಗಿಡಗಳನ್ನು ಕಳೆದುಕೊಂಡ ಖಾಸಗಿ ಜಾಗದ ಮಾಲಕರಿಗೆ ಪರಿಹಾರ ಧನವನ್ನು ದಿನಾಂಕ 08-11-2021 ರಂದು ಶಾಸಕ ಕೆ. ರಘುಪತಿ ಭಟ್ ವಿತರಿಸಿದರು.
ಪ್ರೇಮ ಹೆಗ್ಡೆ, ಯಶೋದ ಪೈ, ಅರುಂಧತಿ ಪೈ, ಹಯಗ್ರೀವ ಭಟ್, ಪಿ. ಸುಬ್ರಾಯ ಕಾಮತ್, ಗೌರಿ ಪೈ ಅವರಿಗೆ ಪರಿಹಾರ ಧನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಕಿಣಿ, ನಗರಸಭಾ ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ, ಗಿರಿಧರ್ ಕರಂಬಳ್ಳಿ, ಭಾರತಿ ಪ್ರಶಾಂತ್, ಯೋಗೀಶ್ ವಡಭಾಂಡೇಶ್ವರ, ನಾಮ ನಿರ್ದೇಶಿತ ಸದಸ್ಯರಾದ ಅರುಣಾ ಪೂಜಾರಿ ಹಾಗೂ ಪಿ.ಡಬ್ಲ್ಯೂ.ಡಿ ಕಾರ್ಯಪಾಲಕ ಅಭಿಯಂತರರಾದ ರವಿ ಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಗದೀಶ್ ಭಟ್, ಸಹಾಯಕ ಅಭಿಯಂತರರಾದ ಸೋಮನಾಥ್ ಉಪಸ್ಥಿತರಿದ್ದರು.