ಕರಾವಳಿ

ನ. 23- ನರಸಿಂಗೆ ದೇವಳಕ್ಕೆ ಕೈವಲ್ಯ ಶ್ರೀಗಳು

ಮಣಿಪಾಲ: ಸಾರಸ್ವತ ಮಠ ಪರಂಪರೆಯ ಆದ್ಯ ಗುರುಪೀಠ ಶ್ರೀ ಸಂಸ್ಥಾನ ಗೌಡಪಾದಾಚರ್ಯ ಕವಳೇ ಮಠದ 77ನೇ ಯತಿ ಶ್ರೀಮದ್ ಶಿವಾನಂದ ಸರಸ್ವತೀ ಸ್ವಾಮೀ ಮಹಾರಾಜ್, ನವೆಂಬರ್ 23ರಂದು ಸಂಜೆ ನರಸಿಂಗೆಯ ಶ್ರೀ ನರಸಿಂಹ ದೇವಸ್ಥಾನಕ್ಕೆ ಚಿತ್ತೈಸಿ ಶ್ರೀ ಕ್ಷೇತ್ರದಲ್ಲಿ ನವನಿರ್ಮಿತ ಗುರುಭವನ ಪ್ರವೇಶ ಮಾಡಲಿದ್ದು, ನವೆಂಬರ್ 28 ರವರೆಗೆ ದೇವಳದಲ್ಲಿ ಮೊಕ್ಕಾಂ ಮಾಡಲಿರುವರು.

ನವೆಂಬರ್ 24 ರಂದು ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಕಾರ್ತಿಕ ದೀಪೋತ್ಸವ, ನವೆಂಬರ್ 27 ರಂದು ಪೂರ್ವಾಹ್ನ ನರಸಿಂಹ ಮಂತ್ರ ಹವನ, ಅಪರಾಹ್ನ ನೂತನ ಪಾಕಶಾಲೆ ಉದ್ಘಾಟನೆ, ಗುರುಭವನ ಉದ್ಘಾಟನಾ ಪ್ರಯುಕ್ತ ಧಾರ್ಮಿಕ ಸಭೆ ಶ್ರೀಗಳ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!