ರಾಜ್ಯ
ಕೋವಿಡ್ ನಿಂದ ಮೃತಪಟ್ಟವರಿಗೆ ₹1 ಲಕ್ಷ ಪರಿಹಾರ ನೀಡುವ ಆದೇಶದಲ್ಲಿ ತಿದ್ದುಪಡಿ

ಕೋವಿಡ್ ನಿಂದ ಮೃತಪಟ್ಟವರಿಗೆ ₹1 ಲಕ್ಷ ಪರಿಹಾರ ನೀಡುವ ಆದೇಶದಲ್ಲಿ ತಿದ್ದುಪಡಿ ತಂದಿದ್ದು, ‘ದುಡಿಯುವ’ ಪದ ತೆಗೆದುಹಾಕಿ, ಪರಿಹಾರಕ್ಕೆ ಪರಿಗಣಿಸುವ ಮೃತ ವ್ಯಕ್ತಿ ಬಿಪಿಎಲ್ ಕುಟುಂಬದವರಾಗಿರಬೇಕು ಎಂಬುದನ್ನು ಸ್ಪಷ್ಟಪಡಿಸಲಾಗಿದೆ.
ಅಂದರೆ ಬಿಪಿಎಲ್ ಕಾರ್ಡ್ ಕುಟುಂಬದಲ್ಲಿ ಯಾರೆ ಮೃತ ಪಟ್ಟರು ಪರಿಹಾರಧನ ಸಿಗಲಿದೆ. ಈ ಮೂಲಕ ಇನ್ನಷ್ಟು ನೊಂದ ಕುಟುಂಬಗಳಿಗೆ ಪರಿಹಾರ ಸಿಗುವಂತಾಗಿದೆ.