ಕರಾವಳಿ

ರೋಟರಿ ಕ್ಲಬ್ ಬ್ರಹ್ಮಾವರ- ಡಯಾಲಿಸಿಸ್ ವಿಭಾಗ ಕೊಡುಗೆ

ಬ್ರಹ್ಮಾವರ: ರೋಟರಿ ಕ್ಲಬ್ ಬ್ರಹ್ಮಾವರ ಸ್ವರ್ಣ ಮಹೋತ್ಸವದ ಸಂದರ್ಭದಲ್ಲಿ ಕಮಲ್ ಎ ಬಾಳಿಗ ಚಾರಿಟೇಬಲ್ ಟ್ರಸ್ಟ್ ಗೆ ಕಿಡ್ನಿ ಡಯಾಲಿಸಿಸ್ ವಿಭಾಗವನ್ನು ಪ್ರಾಯೋಜಕತ್ವ ನೀಡಲಿದೆ. ಜಿಲ್ಲಾ ಗವರ್ನರ್ ರಾಮಚಂದ್ರಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಗ್ಲೋಬಲ್ ಗ್ರಾಂಟ್ ಕಮಿಟಿ ಚೇರ್ಮೆನ್ ಬಿ.ಎಂ.ಭಟ್ ಅವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಯಿತು. ರೋಟರಿ ಕ್ಲಬ್ ಬ್ರಹ್ಮಾವರ ದ ಅಧ್ಯಕ್ಷ ಹರೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಮಲ್ ಎ ಬಾಳಿಗ ಚಾರಿಟೇಬಲ್ ಟ್ರಸ್ಟ್ ನ ನಿರ್ದೇಶಕರಾದ ಡಾ ಪಿ.ವಿ. ಭಂಡಾರಿಯವರು ರೋಟರಿ ಕ್ಲಬ್ ಬ್ರಹ್ಮಾವರ ಹಾಗೂ ಬಾಳಿಗ ಸಮೂಹ ಸಂಸ್ಥೆಗಳ ಮಧ್ಯೆಯಿರುವ ಉತ್ತಮ ಭಾಂದವ್ಯ ಹಾಗೂ ಯೋಜನೆಯ ಕುರಿತಾಗಿ ಮಾತನಾಡಿದರು.

ವಾಲ್ಟರ್ ಪಿಂಟೋ ರವರು ಕಿಡ್ನಿ ಡಯಾಲಿಸಿಸ್ ಕೇಂದ್ರದ ಬಗ್ಗೆ ಮಾಹಿತಿ ನೀಡಿದರು. ಡಾ. ಎ.ವಿ ಬಾಳಿಗ ಆಸ್ಪತ್ರೆಯ ಆಡಳಿತ ಅಧಿಕಾರಿ ಸೌಜನ್ಯ ಶೆಟ್ಟಿ ಸ್ವಾಗತಿಸಿದರು. ಸತೀಶ್ ಶೆಟ್ಟಿ ವಂದಿಸಿದರು. ತಿಮ್ಮಪ್ಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!