ರಾಷ್ಟ್ರೀಯ
ಯುಪಿ ಸಿಎಂ ಯೋಗಿ ಆದಿತ್ಯನಾಥ್ ರನ್ನು ಭೇಟಿಯಾದ ಉಡುಪಿ ಪೇಜಾವರ ಶ್ರೀ

ಲಕ್ನೋ : ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು ಲಕ್ನೋಕ್ಕೆ ತೆರಳಿದ್ದು, ಅಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಸೋಮವಾರ ಭೇಟಿಯಾಗಿ ಮಾತುಕತೆ ನಡೆಸಿದರು.
ಉತ್ತರ ಪ್ರದೇಶದಲ್ಲಿ ಕೋವಿಡ್-19 ಸೋಂಕು ನಿಯಂತ್ರಿಸಿದ ಬಗೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಿರುವುದಕ್ಕಾಗಿ ಪೇಜಾವರ ಶ್ರೀಗಳು ಸಿಎಂ ಆದಿತ್ಯನಾಥ್ ಅವರನ್ನು ಅಭಿನಂದಿಸಿದರು. ಈ ವೇಳೆ ತಾವು ಕೈಗೊಂಡ ಕೆಲವು ಕ್ರಮಗಳನ್ನು ಯೋಗಿ ವಿವರಿಸಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನೀಡಿದ ಸಹಕಾರ ಮತ್ತು ಅಲ್ಲಿ ಶುಚಿತ್ವಕ್ಕೆ ಕೊಟ್ಟ ಮಹತ್ವದ ಕುರಿತೂ ಪೇಜಾವರ ಶ್ರೀಗಳು ಯೋಗಿಯವರನ್ನು ಅಭಿನಂದಿಸಿದರು ಎಂದು ತಿಳಿದು ಬಡಿದೆ.