ಕರಾವಳಿ
ಬೆಳ್ಮಣ್: ವ್ಯಕ್ತಿ ನಾಪತ್ತೆ.
ಕಾರ್ಕಳ: ಪೇಟೆಗೆಂದು ತೆರಳಿದ ವ್ಯಕ್ತಿ ಹಿಂದಿರುಗಿ ಬಾರದೆ ನಾಪತ್ತೆಯಾಗಿರುವ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್ನಿಂದ ವರದಿಯಾಗಿದೆ.
ಬೆಳ್ಮಣ್ ನಿವಾಸಿ ಪ್ರಶಾಂತ್ ಕಾಮತ್ (35) ಎಂಬವರೇ ನಾಪತ್ತೆಯಾದ ವ್ಯಕ್ತಿ.
ಬೆಳ್ಮಣ್ ಸರಕಾರಿ ಪದವಿಪೂರ್ವ ಕಾಲೇಜು ಹತ್ತಿರದ ಕಾಮಾಕ್ಷಿ ಕೃಪಾದ ನಿವಾಸಿ ಪ್ರಶಾಂತ್ ಕಾಮತ್, ಅವಿವಿವಾಹಿತರಾಗಿದ್ದು, ನಂದಳಿಕೆ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ವಿದ್ಯುತ್ ಸಬ್ಸ್ಟೇಷನ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಒಂದು ವರ್ಷದಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದರು ಎನ್ನಲಾಗಿದೆ.
ಜ.15 ರಂದು ಬೆಳಗ್ಗೆ ಬೆಳ್ಮಣ್ ಪೇಟೆಗೆಂದು ತೆರಳಿದ ಅವರು ಬಳಿಕ ಕಾಣೆಯಾಗಿದ್ದಾರೆ ಎಂದು ಅವರ ಸಹೋದರ ಪ್ರದೀಪ್ ಕಾಮತ್ ನೀಡಿದ ದೂರಿನಂತೆ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.