ರಾಷ್ಟ್ರೀಯ
ಉಕ್ರೇನ್ ನಿಂದ ಭಾರತೀಯರ ಏರ್ ಲಿಫ್ಟ್: ವಾಯುಪಡೆ ವಿಮಾನ ಬಳಕೆಗೆ ತೀರ್ಮಾನ
ನವದೆಹಲಿ: ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯರ ತ್ವರಿತ ಏರ್ ಲಿಫ್ಟ್ ಖಾತರಿಪಡಿಸಲು ಕೇಂದ್ರ ಸರ್ಕಾರ ಇದೀಗ ವಾಯುಪಡೆ ವಿಮಾನ ಬಳಸಲು ತೀರ್ಮಾನಿಸಿದೆ.
ವಾಯುಪಡೆ ಬಳಿ ಇರುವ ದೊಡ್ಡದಾದ ಸಿ- 17 ವಿಮಾನಗಳ ಮೂಲಕ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ತೀರ್ಮಾನಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಸೂಚನೆ ನೀಡಿದ್ದಾರೆ.
ಸಿ- 17 ವಿಮಾನದ ಮೂಲಕ ಯುದ್ದ ಪೀಡಿತ ಉಕ್ರೇನ್ ಗೆ ಮಾನವೀಯ ನೆರವು ಪೂರೈಸಲು ಸಾಧ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ