ರಾಜ್ಯ

ಚಲಿಸುತ್ತಿದ್ದ ಕಂಟೇನರ್ ಲಾರಿಗೆ ಬೆಂಕಿ..!

ಬೆಂಗಳೂರು: ಚಲಿಸುತ್ತಿದ್ದ ಕಂಟೇನರ್ ಲಾರಿಯಲ್ಲಿ ತಾಂತ್ರಿಕ ದೋಷದ ಸಮಸ್ಯೆಯಿಂದ ಬೆಂಕಿ ಕಾಣಿಸಿಕೊಂಡ ಪರಿಣಾಮ ಲಾರಿ ಹೊತ್ತಿ ಉರಿದ ಘಟನೆ ದಾಬಸ್ ಪೇಟೆಯ ಸಮೀಪದ ರಾಯರಪಾಳ್ಯ ಗೇಟ್ ಬಳಿ ನೆಡೆದಿದ್ದು ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗುಜರಾತ್ನ ಆದಿತ್ಯ ಕಾರ್ಗೋಸ್ ನಶಿವಾ ಎಕ್ಸ್ ಪ್ರೆಸ್ ಡಿಲಿವರಿ ಕೊರಿಯರ್ ಕಂಪನಿಯ ಕಂಟೇನರ್ ಲಾರಿಯು ಸೂರತ್ ನಿಂದ ಬೆಂಗಳೂರಿಗೆ ಬರುತ್ತಿದ್ದಾಗ ರಾಯರ ಪಾಳ್ಯದ ಬಳಿ ಲಾರಿಯ ಕ್ಯಾಬಿನ್ ನಲ್ಲಿ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಲಾರಿಯನ್ನು ಆವರಿಸಿದ್ದು, ಅದರಲ್ಲಿದ್ದ ಕೋರಿಯರ್ ಬಾಕ್ಸ್ ಗಳು ಬೆಂಕಿಗಾಹುತಿಯಾಗಿವೆ.

ಬೆಂಕಿಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ. ಜೆಸಿಬಿ ಯಂತ್ರದ ಮೂಲಕ ಲಾರಿ ಕ್ಯಾಬಿನ್ ಹಿಂಬದಿಯ ಕಬ್ಬಿಣದ ಶೀಟ್ ಕತ್ತರಿಸಿ ಕೊರಿಯರ್ ಬಾಕ್ಸ್ ಸೇರಿದಂತೆ ಇತರೆ ವಸ್ತುಗಳನ್ನ ಹೊರತೆಗೆಯಲಾಯಿತು. ಸ್ಥಳಕ್ಕೆ ದಾಬಸ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!