ಕರಾವಳಿ
ಉಡುಪಿ : ಕರ್ಕಶ ಹಾರ್ನ್ ಬಳಕೆ – ಪೊಲೀಸರ ಕಾರ್ಯಾಚರಣೆ…!

ಉಡುಪಿ : ಉಡುಪಿ ನಗರ ಭಾಗದಲ್ಲಿ ಕರ್ಕಶ ಹಾರ್ನ್ ಬಳಸಿ ಶಬ್ದಮಾಲಿನ್ಯ ಉಂಟು ಮಾಡುತಿದ್ದ ಬಸ್ಗಳ ವಿರುದ್ಧ ಇಂದು ಉಡುಪಿ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸಿದರು.
ನಗರದ ತಾಲ್ಲೂಕು ಆಫೀಸ್ ಬಳಿ ಉಡುಪಿ ಟ್ರಾಫಿಕ್ ಎಸ್ ಐ ಅಬ್ದುಲ್ ಖಾದರ್ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಮಂಗಳೂರು ಉಡುಪಿ ನಡುವೆ ಸಂಚರಿಸುವ 40 ಕ್ಕೂ ಹೆಚ್ಚು ಎಕ್ಸ್ ಪ್ರೆಸ್, ಸರ್ವಿಸ್ ಬಸ್ ಗಳನ್ನು ತಪಾಸಣೆ ನಡೆಸಿದರು. ಈ ವೇಳೆ ಬಸ್ಸಿನ ಚಾಲಕ, ನಿರ್ವಾಹಕರ ಕೈಯಿಂದಲೇ ಹಾರ್ನ್ಗಳನ್ನು ತೆಗೆಸಿದ ಉಡುಪಿ ಟ್ರಾಫಿಕ್ ಠಾಣಾ ಪೋಲಿಸರು 25 ಕರ್ಕಶ ಹಾರ್ನ್ಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿದ್ದಾರೆ ಎನ್ನಲಾಗಿದೆ.