ಕರಾವಳಿ

ಹೆಬ್ರಿ: ಇಸ್ಪೀಟ್ ಅಡ್ಡೆಗೆ ದಾಳಿ- ಐವರು ವಶಕ್ಕೆ

ಹೆಬ್ರಿ : ಕುಚ್ಚೂರು ರಸ್ತೆಯ ರಾಘವೇಂದ್ರ ಮಠದ ಬಳಿ‌ಇರುವ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಆಡುತ್ತಿದ್ದ ಇಸ್ಪೀಟ್ ಜುಗಾರಿ ಅಡ್ಡೆಗೆ ದಾಳಿ ಮಾಡಿದ ಪೊಲೀಸರು ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹರೀಶ್ ಪೂಜಾರಿ (33), ಆಶ್ರೀತ್ (23),ಮಂಜುನಾಥ ಶೆಟ್ಟಿ (56), ದಿನೇಶ್ ಪೂಜಾರಿ (36), ಸುದಾಕರ ದೇವಾಡಿಗ ಪೊಲೀಸರು ವಶಕ್ಕೆ ಪಡೆದವರು. ಮಾ.26 ರಂದು ಈ ಬಗ್ಗೆ ಖಚಿತ ಮಾಹಿತಿ ಪಡೆದ ಹೆಬ್ರಿ ಠಾಣೆಯಪೊಲೀಸ್ ಉಪನಿರೀಕ್ಷಕ ಸುದರ್ಶನ ದೊಡಮನಿ ಅವರು ಇತರ ಸಿಬ್ಬಂದಿಗಳೊಂದಿಗೆ ಹೆಬ್ರಿ ಗ್ರಾಮದ ಕುಚ್ಚೂರು ರಸ್ತೆಯ ರಾಘವೇಂದ್ರ ಮಠದ ಬಳಿ‌ ಇರುವ ಸಾರ್ವಜನಿಕ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಜುಗಾರಿ ನಿರತ 5 ಮಂದಿಯನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ 1,410 ರೂ. ನಗದು ಹಾಗೂ ಜುಗಾರಿ ಆಟಕ್ಕೆ ಬಳಸುವ ಇತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!