ರಾಜ್ಯ

ಹತ್ತು ದಿನಗಳ ಅಂತರದಲ್ಲಿ ಎರಡನೇ ಬಲಿ ಪಡೆದ ಬಿಬಿಎಂಪಿ ಕಸದ ಲಾರಿ ಹರಿದು -ವೃದ್ದ ಸಾವು

ಬೆಂಗಳೂರು, : ಬಿಬಿಎಂಪಿ ಕಸದ ಲಾರಿ ಗುದ್ದಿ ಬಾಲಕಿ ಮೃತಪಟ್ಟ ಬೆನ್ನಲ್ಲೇ ಇದೀಗ ವೃದ್ದನೊಬ್ಬನನ್ನು ಕಸದ ಲಾರಿ ಬಲಿಪಡೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಬೇಗೂರು ಕ್ರಾಸ್ ಬಳಿ ರೇವಾ ವಿಶ್ವವಿದ್ಯಾನಿಲಯದ ಮುಂಭಾಗ ದ್ವಿಚಕ್ರ ವಾಹನ ಮತ್ತು ಕಸದ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನ ಸವಾರ, ವೃದ್ದ ರಾಮಯ್ಯ (60 ) ಮೃತಪಟ್ಟಿದ್ದಾರೆ.

ರಾಮಯ್ಯ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ದ್ವಿಚಕ್ರವಾಹನಕ್ಕೆ ಗುದ್ದಿದ ಕಸದ ಲಾರಿಯು ರಸ್ತೆಗೆಸೆಯಲ್ಪಟ್ಟ ರಾಮಯ್ಯ ಅವರ ಮೇಲೆ ಹರಿದಿದೆ. ಇದರಿಂದ ಅವರ ದೇಹ ಛಿದ್ರವಾಗಿ ರಸ್ತೆಯಲ್ಲಿ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಮಯ್ಯ ಅವರು ಸಂಬಂಧಿಕರ ನಿಶ್ಚಿತಾರ್ಥಕ್ಕೆ ಹೋಗಿ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಕಳೆದ ಹತ್ತು ದಿನಗಳ ಹಿಂದಷ್ಟೇ ಹೆಬ್ಬಾಳದ ಬಾಲಕಿ ಅಕ್ಷಯಾ ಅವರಿಗೆ ಬಿಬಿಎಂಪಿ ಕಸದ ಲಾರಿ ಗುದ್ದಿ ಸಾವು ಸಂಭವಿಸಿತ್ತು. ಇದೀಗ ಒಂದು ವಾರದ ಅಂತರದಲ್ಲಿ ಬಿಬಿಎಂಪಿ ಕಸದ ಲಾರಿ ಎರಡನೇ ಬಲಿ ಪಡೆದುಕೊಂಡಿದೆ. ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!