ರಾಜ್ಯ

ಕೋವಿಡ್ ಹೆಚ್ಚಳ: ‘ನಿಗದಿಯಂತೆಯೇ ಮೇ 16ರಿಂದ ಶಾಲೆ ಆರಂಭ’ – ಬಿ.ಸಿ ನಾಗೇಶ್‌

ಬೆಂಗಳೂರು : ಕೊರೊನಾ ಕಾರಣಕ್ಕೆ ಶಾಲೆ ಬಂದ್ ಮಾಡಲ್ಲ , ನಿಗದಿಯಂತೆಯೇ ಮೇ 16ರಿಂದ ಶಾಲೆ ಪ್ರಾರಂಭವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ತಿಳಿಸಿದ್ದಾರೆ.

ರಾಜ್ಯಕ್ಕೆ ಕೊರೊನಾ 4 ನೇ ಅಲೆ ಬರುವ ಬಗ್ಗೆ ಆತಂಕ ಎದುರಾಗಿದ್ದು, ರಾಜ್ಯ ಸರ್ಕಾರ ಹೊಸ ಕೊರೊನಾ ಮಾರ್ಗಸೂಚಿಗಳನ್ನು ಹೊರಡಿಸುತ್ತಿದೆ.ಅವುಗಳನ್ನು ಪಾಲಿಸುತ್ತೇವೆ ಮಾಹಿತಿ ಪ್ರಕಾರ ಜೂನ್‌ ಜುಲೈನಲ್ಲಿ ಕೊರೊನಾ ನಾಲ್ಕನೇ ಅಲೆ ಬರುತ್ತದೆ ಹೇಳಿದ್ದಾರೆ. ಮೇ 16ರಿಂದ ಶಾಲೆಯ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ. ಎಂದಿನಂತೆ ಶಾಲೆ ತೆರೆಯಲಾಗುತ್ತದೆ.ಮಕ್ಕಳ ವಿದ್ಯಾಭಾಸ್ಯಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.

ಎಸ್ ಎಸ್ ಎಲ್ ಸಿ ಮೌಲ್ಯ ಮಾಪನ ಆರಂಭಗೊಂಡಿದೆ. ಅಂದುಕೊಂಡ ವೇಳೆಗೆ ಮುಕ್ತಾಯಗೊಳ್ಳೋ ನಿರೀಕ್ಷೆಯಿದೆ. ದ್ವಿತೀಯ ಪಿಯುಸಿಯ ಪರೀಕ್ಷಾ ಫಲಿತಾಂಶವನ್ನು ಮೇ 2ನೇ ವಾರದಲ್ಲಿ ಪ್ರಕಟಿಸಲಾಗುತ್ತದೆ ಎಂದು ಹೇಳಿದ್ದಾರೆ.

ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಭೋದನೆ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕ್ಲಾರೆನ್ಸ್ ಶಾಲೆ ಕೇಂದ್ರೀಯ ಸಿಲೆಬಸ್ ವ್ಯಾಪ್ತಿಗೆ ಬರುತ್ತದೆ. ಯಾವುದೇ ಸಿಲೆಬಸ್ ಇರಲಿ ಧರ್ಮ ಬೋಧನೆ ತಪ್ಪು. ಕ್ಲಾರೆನ್ಸ್ ಶಾಲೆಯಲ್ಲಿ ಎಲ್ಲ ಧರ್ಮದ ಮಕ್ಕಳೂ ಇದ್ದಾರೆ. ಸಂವಿಧಾನದಡಿ ಶಿಕ್ಷಣ ಇಲಾಖೆ ಕ್ರಮ ತೆಗೆದುಕೊಳ್ಳುತ್ತೇವೆ. ಅಲ್ಪಸಂಖ್ಯಾತ ಶಾಲೆಯಲ್ಲಿ ಧರ್ಮದ ಬೋಧನೆ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿ.ಸಿ.ನಾಗೇಶ್ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!