ಕರಾವಳಿತಾಜಾ ಸುದ್ದಿಗಳು

ಮತಾಂಧ ಶಕ್ತಿಗಳ ಓಲೈಕೆಗಾಗಿ ಸಿದ್ದರಾಮಯ್ಯರಿಂದ ಆರ್.ಎಸ್.ಎಸ್ ವಿರುದ್ಧ ವಾಗ್ದಾಳಿ: ಯಶ್ನಾಲ್ ಸುವರ್ಣ ಆಕ್ರೋಶ

ಉಡುಪಿ: ರಾಷ್ಟ್ರರಕ್ಷಣೆ, ದೇಶ ಪ್ರೇಮ, ಧರ್ಮ ರಕ್ಷಣೆ ಹಾಗೂ ಸೇವಾ ಮನೋಭಾವದ ತಳಹದಿಯಲ್ಲಿ 97 ವರ್ಷಗಳಿಂದ ತನ್ನ ಸಿದ್ಧಾಂತದೊಂದಿಗೆ ಎಂದಿಗೂ ರಾಜೀಯಾಗದೆ ಮುನ್ನಡೆಯುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಂದಿಸಿ ಮತಾಂಧ ಶಕ್ತಿಗಳ ಓಲೈಕೆಗೆ ಮುಂದಾಗಿರುವ ಸಿದ್ಧರಾಮಯ್ಯರ ವಿರುದ್ಧ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತನ್ನ ರಾಜಕೀಯ ನೆಲೆಗಾಗಿ ಯಾವುದೇ ಸಿದ್ಧಾಂತಕ್ಕೆ
ಬದ್ಧರಾಗದೆ ಊಸರವಳ್ಳಿಯಂತೆ ಪಕ್ಷ ಬದಲಿಸಿ ಅಧಿಕಾರ ಅನುಭವಿಸಿರುವ ಸಿದ್ದರಾಮಯ್ಯಗೆ ಆರ್.ಎಸ್.ಎಸ್ ಬಗ್ಗೆ ಮಾತನಾಡುವ ಯೋಗ್ಯತೆಯೇ ಇಲ್ಲ. ರಾಷ್ಟ್ರಕ್ಕಾಗಿ ಸೇವೆಗಾಗಿ
ಸರ್ವಸ್ವವನ್ನೂ ಸಮರ್ಪಿಸಿರುವ ಸಂಘದ ಸ್ವಯಸೇವಕರ ಪಾದದ ಧೂಳಿಗೂ ಸಮನಲ್ಲದ ಸಿದ್ದರಾಮಯ್ಯರಿಂದ ಆರ್.ಎಸ್.ಎಸ್ ಬಗ್ಗೆ ಉತ್ತಮ ಮಾತು ನಿರೀಕ್ಷಿಸುವುದು ಮೂರ್ಖತನ.

ದೇಶದಲ್ಲಿ ತುರ್ತು ಸಂದರ್ಭದಲ್ಲಿ ಕಾಶ್ಮೀರದಿಂದ
ಕನ್ಯಾಕುಮಾರಿಯವರೆಗೆ ಎಲ್ಲೇ ಅನಾಹುತವಾದಾಗ
ಜನಸಾಮಾನ್ಯರ ಸೇವೆಗೆ ಮೊದಲಾಗಿ ಧಾವಿಸುವ ಸಂಘದ ಸದಸ್ಯರಿಗೆ ಗಣವೇಶದ ಸಮವಸ್ತ್ರವಾಗಿದ್ದ ಚಡ್ಡಿಯ ಬಗ್ಗೆ ಅವಹೇಳನ ಮಾಡಿ ಸಿದ್ದರಾಮಯ್ಯ ಮಾನಸಿಕ ಸ್ಥೆರ್ಯ ಕುಗ್ಗಿಸುವ ವ್ಯರ್ಥ ಪ್ರಯತ್ನದಲ್ಲಿ ತೊಡಗಿದ್ದು, ಕಳೆದ 4 ವರ್ಷದಿಂದ ಗಣವೇಶದ ಸಮವಸ್ತ್ರ ಪ್ಯಾಂಟ್ ಬದಲಾಗಿರುವ ವಿಚಾರ ಸಿದ್ದರಾಮಯ್ಯಗೆ ಇನ್ನೂ ಅರಿವಾದಂತಿಲ್ಲ.

ಸಿದ್ದರಾಮಯ್ಯ ಕೂಡಲೇ ಅಲ್ಪಸಂಖ್ಯಾತರ ಓಲೈಕೆಗಾಗಿ ಸಂಘದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಿ, ಮುಂದಿನ ದಿನದಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನಿಗೆ ತಕ್ಕ ಉತ್ತರ ನೀಡಲಿದ್ದಾರೆ
ಎಂದು ಯಶ್ನಾಲ್ ಸುವರ್ಣ ಪ್ರಕಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!