ಕರಾವಳಿ

ಮೀನುಗಾರಿಕೆ ತೆರಳಿದ್ದ ಬೋಟ್ ಮುಳುಗಡೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪ ಮೀನುಗಾರಿಕೆಗೆ ತೆರಳಿದ್ದ ಬೋಟ್ ಒಂದು ಸಮುದ್ರದಲ್ಲಿ ಮುಳುಗಿದ ಘಟನೆ ಪಣಂಬೂರಿನಿಂದ ಸುಮಾರು ‍90 ಮೀಟರ್ ದೂರ ಆಳ ಸಮುದ್ರದಲ್ಲಿ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಮಂಗಳೂರು ಪಣಂಬೂರು ಕರಾವಳಿಯಿಂದ 90 ನಾಟಿಕಲ್ ಮೈಲು ದೂರದಲ್ಲಿ ಬೋಟ್‌ ಮುಳುಗಡೆಗೊಂಡಿದೆ ಹಡಗಿನಲ್ಲಿ 11 ಮಂದಿ ಮೀನುಗಾರರರಿದ್ದರು. ಅವರನ್ನು ಸಮೀಪದಲ್ಲಿದ್ದ ಇನ್ನೊಂದು ಹಡಗಿನಲ್ಲಿದ್ದವರು ರಕ್ಷಿಸಿದ್ದಾರೆ ಎಂದು ಮಾಹಿತಿ ತಿಳಿಯಲಾಗಿದೆ.

ಶಶಿ ಬೆಂಗ್ರೆ ಎಂಬುವವರ ಒಡೆತನದಲ್ಲಿ ದೋಣಿ ಇತ್ತು ಎಂದು ತಿಳಿದುಬಂದಿದೆ.
ಭೀಕರ ಮಳೆ ಗಾಳಿಯ ನಡುವೆ ಈ ಬೋಟ್ ಮೀನುಗಾರಿಕೆ ತೆರಳಿತ್ತು.ಆ ಸಂದರ್ಭದಲ್ಲಿ ಸಮುದ್ರದಲ್ಲಿ ಬೋಟ್ಮು ಮುಳುಗಡೆಯಾಗಿದೆ.ಅದರಲ್ಲಿದ್ದ ಮೀನುಗಾರರನ್ನು ರಕ್ಷಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!