ಕರಾವಳಿ
ಅಬತರ” ತುಳು ಚಿತ್ರ ಶಾಸಕ ರಘುಪತಿ ಭಟ್ ಉದ್ಘಾಟನೆ
ಅರ್ಜುನ್ ಕಾಪಿಕಾಡ್ ಅವರು ನಟಿಸಿ ನಿರ್ದೇಶಿಸಿರುವ ತುಳು ಚಲನಚಿತ್ರ “ಅಬತರ” ನಾಳೆ ದಿನಾಂಕ 18-08-2022 ರಿಂದ ರಾಷ್ಟ್ರದಾದ್ಯಂತ ತೆರೆ ಕಾಣಲಿದ್ದು, ಮಕ್ಕಳಿಗಾಗಿ ಮಣಿಪಾಲದ ಕೆನರಾ ಮಾಲ್ ನಲ್ಲಿ ಇಂದು ದಿನಾಂಕ 17-08-2022 ರಂದು ಚಲನಚಿತ್ರವನ್ನು ಆಯೋಜಿಸಲಾಗಿದ್ದು ಶಾಸಕ ಶ್ರೀ ಕೆ. ರಘುಪತಿ ಭಟ್ ರವರು ಚಲನಚಿತ್ರ ಉದ್ಘಾಟಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ತುಳು ಚಲನಚಿತ್ರ ನಟ ಹಾಗೂ ನಿರ್ದೇಶಕರಾದ ದೇವದಾಸ್ ಕಾಪಿಕಾಡ್ ಮತ್ತು ಧರ್ಮ ಪತ್ನಿ ಶರ್ಮಿಳಾ ಕಾಪಿಕಾಡ್ ಹಾಗೂ ಅಬತರ ಚಿತ್ರ ತಂಡದವರು ಉಪಸ್ಥಿತರಿದ್ದರು