ರಾಷ್ಟ್ರೀಯ
ಮೇಘಸ್ಫೋಟ,: ಹಿಮಾಚಲ ಪ್ರದೇಶ ಪ್ರವಾಹದಲ್ಲಿ 15 ಮಂದಿ ಸಾವು
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ
ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದ 15 ಮಂದಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಬೆಟ್ಟ ಗುಡ್ಡಗಳು ಕುಸಿದಿದೆ. ನದಿಗಳು ಉಕ್ಕಿ ಹರಿದಿದೆ. ಈ ಭೀಕರ ಪ್ರವಾಹಕ್ಕೆ 15 ಮಂದಿ ಸಾವನ್ನಪ್ಪಿದ್ದರೆ, ಕೆಲವರು ವಾಹದಲ್ಲಿ ಕೊಚ್ಚಿ ಹೋಗಿದ್ದಾರೆ.
ಮನಾಲಿ ಹೆದ್ದಾರಿ ಬಂದ್ ಆಗಿದೆ. 11ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿದೆ. ಬೆಟ್ಟ ಕುಸಿದು
ವಾಹನಗಳು ಜಖಂಗೊಂಡಿದೆ. ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. 7ಕ್ಕೂ ಹೆಚ್ಚು ರಸ್ತೆಗಳು ಬಂದ್ ಆಗಿವೆ.
ಹವಾಮಾನ ಇಲಾಖೆ ಸೂಚನೆ ನೀಡಿದ ಬೆನ್ನಲ್ಲೇ ಮಳೆ ಆರಂಭಗೊಂಡಿದೆ. 2 ರಿಂದ 3 ಗಂಟೆ ಸುರಿದ ಮಳೆಗೆ ಹಿಮಾಚಲ ಪ್ರದೇಶ, ಉತ್ತರಖಂಡ ರಾಜ್ಯದ ಕೆಲ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರಿ ಮೇಘಸ್ಫೋಟಕ್ಕೆ ಹಿಮಾಚಲ ಪ್ರದೇಶ ತತ್ತರಿಸಿದೆ.