ಕರಾವಳಿ
ಸಂಗಮ್ ಸೇತುವೆಯ ಮೇಲೆ ಸೈಕಲ್ ಇಟ್ಟು ನದಿಗೆ ಹಾರಿದ ಯುವಕ

ಕುಂದಾಪುರ: ಕುಂದಾಪುರದ ರಾಷ್ಟ್ರೀಯ ಹೆದ್ದಾರಿಯ ಸಂಗಮ್ ಸೇತುವೆಯ ಮೇಲೆ ಯುವಕನೋರ್ವ ಸೈಕಲ್ ಇಟ್ಟು ಪಂಚಾಗಂಗಾವಳಿ ನದಿಗೆ ಹಾರಿರುವ ಘಟನೆ ನಡೆದಿದೆ. ಸಾಯಿಷ್ ನದಿಗೆ ಹಾರಿರುವ ಯುವಕ ಎಂದು ಗುರುತಿಸಲಾಗಿದೆ.
ಕುಂದಾಪುರದ ಸಂಗಮ್ ಸೇತುವೆಯ ಮೇಲಿಂದ ಈತ ನದಿಗೆ ಹಾರಿರುವುದನ್ನು ವಾಹನ ಸವಾರರು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಯುವಕನೂ ನದಿಗೆ ಹಾರುವ ಮುನ್ನ ಮೊಬೈಲ್ ಸೇತುವೆ ಮೇಲೆ ಇಟ್ಟಿದ್ದು ಅವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ನದಿಗೆ ಹರಿದ ಯುವಕನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.