ಕರಾವಳಿ
ಕಾರ್ಕಳ: ನಿಟ್ಟೆ ಇಸ್ಪೀಟ್ ಜುಗಾರಿ ಅಡ್ಡೆಗೆ ದಾಳಿ- ನಾಲ್ವರು ವಶಕ್ಕೆ
ಕಾರ್ಕಳ :ನಿಟ್ಟೆ ಗ್ರಾಮದ ಕೆಮ್ಮಣ್ಣು ಡ್ಯಾಮ್ ಬಳಿಯ ಪಾಳು ಬಿದ್ದ ಕಟ್ಟಡದಲ್ಲಿ ಇಸ್ಪೀಟು ಜುಗಾರಿ ಆಡುತ್ತಿದ್ದ ನಾಲ್ಕು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು
ಕೊಂಡಿದ್ದಾರೆ.
ನಿಟ್ಟೆ ಗ್ರಾಮದ ಪ್ರಥಮ್ ಶೆಟ್ಟಿ (29), ಸಂದೀಪ (29), ಗುರು ಪ್ರಸಾದ (23), ರಾಜೇಶ್ ಪೂಜಾರಿ
ಪೊಲೀಸರು ವಶಕ್ಕೆ ಪಡೆದವರು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಕಾರ್ಕಳ ಪೊಲೀಸರು ಸೆ.9 ರಂದು ನಿಟ್ಟೆ ಗ್ರಾಮದ ಕೆಮ್ಮಣ್ಣು ಡ್ಯಾಮ್
ನ ಬಳಿಯ ಪಾಳು ಬಿದ್ದ ಕಟ್ಟಡಕ್ಕೆ ದಾಳಿ ನಡೆಸಿ, ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಡುತ್ತಿದ್ದ ನಾಲ್ವರನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ 1,360 ರೂ. ನಗದು ಹಾಗೂ ಆಟಕ್ಕೆ ಬಳಸಿದ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.