ಕರಾವಳಿ
10 ವರ್ಷಗಳಿಂದ ಕೇರಳದಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
ಮಂಗಳೂರು : ನಕಲಿ ಪಾಸ್ಪೋರ್ಟ್ನಲ್ಲಿ 2008 ರ ಅಕ್ಟೋಬರ್ ದುಬೈಗೆ ತೆರಳಲು ಯತ್ನಿಸಿದ್ದ ಆರೋಪಿಯನ್ನು ಬಜ್ಪೆ ಪೊಲೀಸರು ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ಅಧಿಕಾರಿಗಳ ಪತ್ತೆ ಮೇರೆಗೆ ಬಂಧಿಸಿದ್ದಾರೆ.
ಕಳೆದ 10 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವ್ಯಕ್ತಿ ಮಮ್ಮುನ್ಹಿ ಅಲಿಯಾಸ್ ಮೊಹಮ್ಮದ್ ಕುಂಞಿ ಎಂದು ತಿಳಿದು ಬಂದಿದೆ .ಈತ ನಿರಂತರವಾಗಿ ವಿಳಾಸ ಬದಲಿಸಿಕೊಂಡು ಕೇರಳದಲ್ಲಿ ತಲೆಮರೆಸಿಕೊಂಡಿದ್ದಾನೆ.
ಪೊಲೀಸರು ಕೇರಳದ ಹೊಸದುರ್ಗ ಜಿಲ್ಲೆಯ ಹರಿಪುರಂ ಪುಲ್ಲೂರು ಎಂಬಲ್ಲಿ ಕುಂಞಿಯನ್ನು ಬಂಧಿಸಿದ್ದಾರೆ.