ಕರಾವಳಿ
ಬೆಳ್ಳಿಯ ದೇವರ ಪೀಠ ಸಹಿತ ಹಲವು ಮನೆಯಲ್ಲಿದ್ದ ಸೊತ್ತುಗಳ ಕಳವು
ಉಡುಪಿ: ಉಡುಪಿ ಶಾರದಾ ಕಲ್ಯಾಣ ಮಂಟಪ ಸಮೀಪ ಮನೆಗೆ ನುಗ್ಗಿದ ಕಳ್ಳರು ಮನೆ ಸೊತ್ತುಗಳ ಸಹಿತ ದೇವರ ಬೆಳ್ಳಿಯ ಪೀಠವನ್ನು ಕಳವುಗೈದ ಘಟನೆ ನಡೆದಿದೆ.
ಕಳ್ಳರು ನಾರಾಯಣ ಎಂಬವರ ಮನೆಗೆ ನುಗ್ಗಿದ್ದು, ಡಿ ವಿ ಆರ್, ಬೆಳ್ಳಿಯ ಸಾಮಗ್ರಿ, ಬೆಳ್ಳಿಯ ದೇವರ ಪೀಠ ಸಹಿತ ಹಲವು ಮನೆಯಲ್ಲಿದ್ದ ಸೊತ್ತುಗಳನ್ನು ಕಳವು ಮಾಡಿದ್ದಾರೆ. ಸುಮಾರು 64 ಸಾವಿರ ಮೌಲ್ಯ ಸೊತ್ತುಗಳು ಕಳವಾಗಿದೆ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಪ್ರಕರಣ ಉಡುಪಿ ನಗರ ಠಾಣೆಯಲ್ಲಿ ದಾಖಲಾಗಿದ್ದು ,ಪೊಲೀಸರು ಕಳ್ಳರ ಪತ್ತೆಗೆ ಶೋಧ ಕಾರ್ಯವನ್ನು ಸಿಸಿ ಕ್ಯಾಮರಾ ದ ಆಧಾರದಲ್ಲಿ ನಡೆಸುತ್ತಿದ್ದಾರೆ.