25ವರ್ಷದ ಬಳಿಕ ಕಾರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಂಧನ

ಮಂಗಳೂರು: ಪಿರಿಯಾಪಟ್ಟಣದ ಆರನೆಹಳ್ಳಿಯಲ್ಲಿ ಕಾರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು 25ವರ್ಷದ ಬಳಿಕ ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಾರು ಕಳ್ಳ ಆರೋಪಿ ಪಿರಿಯಾಪಟ್ಟಣದ ಆರನೆಹಳ್ಳಿ ನಿವಾಸಿ ಅಸ್ಲಾಂ ಪಾಷಾ ,ಬಂಧಿತನು 1997ರ ನವೆಂಬರ್ 11ರಂದು ಅಂಬಾಸಿಡರ್ ಕಾರನ್ನು ಮಂಗಳೂರು ನಗರದ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದನು.
ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿತ್ತು.
ಫೆಬ್ರವರಿ 8 2000ರಿಂದ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ಗೈರು ಹಾಜರಾಗಿದ್ದನು. ಈ ಪ್ರಕರಣ 2015ರ ಮೇ 7 ರಿಂದ ಎಲ್ ಪಿಸಿ ಆಗಿತ್ತು. ಈ ಬಗ್ಗೆ ಪೊಲೀಸರು ಆರೋಪಿಯನ್ನು ಹುಡುಕಾಟ ನಡೆಸುತ್ತಿದ್ದರು.
ಆದರೆ ಆರೋಪಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದನು. 25 ವರ್ಷದ ಬಳಿಕ ಪೊಲೀಸರು ಈತನನ್ನು ಸೆಪ್ಟೆಂಬರ್ 12ರಂದು ಪಿರಿಯಾಪಟ್ಟಣದ ಆರನೆಹಳ್ಳಿಯಲ್ಲಿ ಬಂಧಿಸಿದ್ದಾರೆ. ಈ ಬಗ್ಗೆ ಪ್ರಕರಣ ಮಂಗಳೂರು ದಕ್ಷಿಣ ಠಾಣೆಯಲ್ಲಿ ದಾಖಲಿಸಿಕೊಂಡ ಪೊಲೀಸರುನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಿದ್ದಾರೆ.