ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷರಾಗಿ ಶ್ರೀ ಕೆ ಪ್ರಶಾಂತ್ ಬಾಳಿಗಾ ಪುನರಾಯ್ಕೆ

ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ 30 ನೇ ವಾರ್ಷಿಕ ಮಹಾಸಭೆಯು ತಾ 24 -9-2022 ರಂದು ಸಂಘದ ಕೋಟೇಶ್ವರ ಗೋವಿಂದಾಯ ವಿಠಲ ಕಾಮತ್ ಸಭಾಂಗಣದಲ್ಲಿ ಜರುಗಿತು.
ಶ್ರೀ ಕೆ ಪ್ರಶಾಂತ್ ಬಾಳಿಗಾ, ಕೆ.ಕೆ. ಫಿಶ್ ನೆಟ್ ಕೋ, ನೇಜಾರ್ ಇವರು 2022-23 ನೇ ಸಾಲಿನ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಫುನರಾಯ್ಕೆಯಾದರು. ಉಪಾಧ್ಯಕ್ಷರಾಗಿ, ಶ್ರೀ ಹರೀಶ್ ಕುಂದರ್ ಶ್ರೀ ಯು ಅಜಿತ್ ಕುಮಾರ್ ಶೆಣೈ, ಶ್ರೀ ಎಂ ವಸಂತ ಕಿಣಿ, ಕಾರ್ಯದರ್ಶಿಯಾಗಿ ಎಂ ವಲ್ಲಭ್ ಭಟ್, ಕೋಶಾಧಿಕಾರಿಯಾಗಿ ಶ್ರೀ ಕೃಷ್ಣ ಪ್ರಸಾದ್ ಶೆಟ್ಟಿ ಜೊತೆ
ಕಾರ್ಯದರ್ಶಿಯಾಗಿ ಶ್ರೀ ಕೆ . ಸುರೇಶ್ ಶೆಣೈ, ಶ್ರೀ ಶ್ರೀನಿವಾಸ್ ಶೆಟ್ಟಿಗಾರ್, ಶ್ರೀ ಕೆ ರಂಜನ್
ಕಲ್ಕೂರ, ಅವರು ಅವಿರೋಧವಾಗಿ ಆಯ್ಕೆಯಾದರು.
ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಐ ಆರ್ ಫೆರ್ನಾಂಡಿಸ್ ಮತ್ತು ಎಲ್ಲ ಪೂರ್ವ ಅಧ್ಯಕ್ಷರು ಸೇರಿ ಶ್ರೀ ಎಂ ವಿಶ್ವೇಶ್ವರಯ್ಯ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆಗೈದು ಗೌರವ ಸೂಚಿಸಿದರು.
ಸಂಘದ ಹಿರಿಯ ಮಾಜಿ ಅಧ್ಯಕ್ಷರುಗಳಾದ ಶ್ರೀ ಎಂ. ವಿಶ್ವನಾಥ ಭಟ್, ಶ್ರೀ ವಿನ್ನಂಟ್ ಪಿಂಟೋ ಶುಭಾಂಶನಗೈದರು. ಸಂಘದ ಸದಸ್ಯರಾದ ಶ್ರೀ ವೆಂಕಟೇಶ್ ಆರ್ ಪ್ರೈ ಹಾಗೂ ಶ್ರೀ ಎಂ. ವಾಮನ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.