ರಾಜ್ಯ
ಹೊಳೆಗೆ ಸ್ನಾನಕ್ಕೆ ತೆರಳಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಸಾವು..!
ಕಾಸರಗೋಡು: ಹೊಳೆಗೆ ಸ್ನಾನಕ್ಕೆ ತೆರಳಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೆ 29ರ ಬುಧವಾರ ಸಂಜೆ ಪಯಸ್ವಿನಿ ಹೊಳೆಯ ಬೇಡಡ್ಕ ಕರಿಚ್ಚೇರಿ ಯಲ್ಲಿ ನಡೆದಿದೆ.
ಮೃತ ಯುವಕರನ್ನು ಕೊಲ್ಲಂ ನ ವಿಜಿತ್ ಮತ್ತು ತಿರುವನಂತಪುರ ದ ರಂಜು ಎಂದು ಗುರುತಿಸಲಾಗಿದೆ.
ಸ್ನೇಹಿತರ ಜೊತೆ ಬೇಡಡ್ಕ ಮುನಂಬ್ ತೂಗು ಸೇತುವೆ ಬಳಿ ಹೊಳೆಗೆ ಸ್ನಾನಕ್ಕೆಂದು ಇಳಿದಿದ್ದ ಸಂದರ್ಭದಲ್ಲಿ ವಿಜಿತ್ ಮತ್ತು ರಂಜು ಇಬ್ಬರು ಮುಳುಗಿದ್ದರು ಈ ವೇಳೆ ಇಬ್ಬರೂ ನೀರುಪಾಲಾಗಿದ್ದಾರೆ. ಬಳಿಕ ಅಗ್ನಿಶಾಮಕ ದಳದ ಸಿಬಂದಿಗಳು, ಪೊಲೀಸರು ಹಾಗೂ ಪರಿಸರವಾಸಿಗಳು ಶೋಧ ನಡೆಸಿದ್ದು, ರಾತ್ರಿ 11 ಗಂಟೆ ಸುಮಾರಿಗೆ ಇಬ್ಬರ ಮೃತದೇಹವೂ ಪತ್ತೆಯಾಗಿದ್ದು, ವಿಜಿತ್ ನ ಮೃತದೇಹ ತೂಗು ಸೇತುವೆ ಬಳಿ ಹಾಗೂ ರಂಜುವಿನ ಮೃತದೇಹ ಘಟನೆ ನಡೆದ ಸ್ವಲ್ಪ ದೂರ ಪತ್ತೆಯಾಗಿದೆ.