ಕರಾವಳಿ

ಶೇಂದಿ ತೆಗೆಯುವ ಸಂದರ್ಭ ಮರದಿಂದ ಬಿದ್ದು ಮೂರ್ತೆದಾರ ನಿಧನ

ಮೂಡುಬಿದ್ರೆ:ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ
ವರ್ಣಬೆಟ್ಟು ಎಂಬಲ್ಲಿ ಶುಕ್ರವಾರ ತಾಳೆಮರದ ಮೇಲಿಂದ
ಬಿದ್ದು ಮೂರ್ತದಾರರೊಬ್ಬರು ಮೃತಪಟ್ಟಿರುವ ಘಟನೆ
ನಡೆದಿದೆ.

ಪಂಜಿಗುರಿ, ವರ್ಣಬೆಟ್ಟು ನಿವಾಸಿ ಸುರೇಶ್ ಪೂಜಾರಿ (42)
ದುರಂತದಲ್ಲಿ ಮೃತಪಟ್ಟ ವ್ಯಕ್ತಿ.

ಸುರೇಶ್ ಅವರು ಮಧ್ಯಾಹ್ನದ ವೇಳೆ ಶೇಂದಿತೆಗೆಯಲೆಂದು ತಮ್ಮ ಮನೆಯ ಹಿಂಬಾದ ತಾಳೆ ಮರದ ಹತ್ತಿರ ಹೋಗಿದ್ದರು.

ಎಷ್ಟೋ ಹೊತ್ತಾದರೂ ವಾಪಸ್ ಬಾರದ ಕಾರಣ
ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಅವರು ತಾಳೆ
ಮರದ ಬಳಿ ಶವವಾಗಿ ಪತ್ತೆಯಾಗಿದ್ದಾರೆ, ಮೇಲ್ನೋಟಕ್ಕೆ
ಮೇಲಿನಿಂದ ಬಿದ್ದಿದ್ದು ಮೃತಪಟ್ಟಿರುವಂತೆ ಶಂಕೆ ವ್ಯಕ್ತವಾಗಿದೆ.

ಸುರೇಶ್ ಅವರು ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳನ್ನು
ಅಗಲಿದ್ದಾರೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!