ಕರಾವಳಿ

ಶಂಕರಪುರ- ಕಾನೂನು ಮಾಹಿತಿ ಕಾರ್ಯಕ್ರಮ

ಕಟಪಾಡಿ: ರೋಟರಿ ಕ್ಲಬ್ ಶಂಕರಪುರ ಹಾಗೂ ಜಿಲ್ಲಾ
ಕಾನೂನು ಸೇವಾ ಪ್ರಾಧಿಕಾರ ಜಂಟಿ ಆಶ್ರಯದಲ್ಲಿ ಸಂವಿಧಾನ ದಿನಾಚರಣೆ ನಡೆಯಿತು. ಕಾನೂನು ಸೇವೆಗಳ ಕಾರ್ಯಗಳು ಮತ್ತು ಅದರ ಉದ್ದೇಶಗಳ ಬಗ್ಗೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶರ್ಮಿಳ ಎಸ್ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ವಕೀಲರಾದ ಪೆಟ್ರಿಷಿಯ ಡೇಸಾ, ಕ್ಲಬ್ ಸರ್ವಿಸ್ ಡೈರೆಕ್ಟರ್ ಫ್ರಾನ್ಸಿಸ್ ಡೇಸಾ ಉಪಸ್ಥಿತರಿದ್ದರು. ರೋಟರಿ ಅಧ್ಯಕ್ಷರಾದ ಗ್ಲಾಡಸನ್ ಕುಂದರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ರೋಟರಿ ಭವನದಲ್ಲಿ ನಡೆಯಿತು.

ಜಾರ್ಜ್ ಡಿಸಿಲ್ವ, ಚಂದ್ರ ಪೂಜಾರಿ, ಎಡ್ವಾರ್ಡ್ ಮೆಂಡೋನ್ಸ ಮುಂತಾದವರು ಉಪಸ್ಥಿತರಿದ್ದರು. ಲಕ್ಕಿ ರೋಟರಿಯನ್ನಾಗಿ ಪೌಲ್ ಕ್ವಾಡ್ರಸ್ ಆಯ್ಕೆಯಾದರು, ಕಾರ್ಯದರ್ಶಿ ಸಿಲ್ವಿಯಾ ಕ್ಯಾಸ್ಟಲೀನೋ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!