ಕರಾವಳಿ
ಕೋಟೇಶ್ವರ ಕೋಟಿಲಿಂಗೇಶ್ವರ ರಥೋತ್ಸವ ನಿಮಿತ್ತ ಮದ್ಯ ಮಾರಾಟ ನಿಷೇಧ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಕುಂದಾಪುರ: ತಾಲೂಕಿನ ಕೋಟೇಶ್ವರ ಗ್ರಾಮದ ಮಹತೋಬಾರ ಶ್ರೀ ಕೋಟಿಲಿಂಗೇಶ್ವರರಥೋತ್ಸವ
ಕಾರ್ಯಕ್ರಮವು ಡಿಸೆಂಬರ್ 9 ರವರೆಗೆ ನಡೆಯಲಿದ್ದು, ಈ
ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ
ಶಾಂತಿ ಕಾಪಾಡುವ ದೃಷ್ಟಿಯಿಂದ ಕೋಟೇಶ್ವರ,
ಹಂಗಳೂರು ಮತ್ತು ಗೋಪಾಡಿ ಗ್ರಾಮಗಳಲ್ಲಿ ಡಿ.8ರ
ಬೆಳಗ್ಗೆ 6 ರಿಂದ ಡಿ.9 ರ ರಾತ್ರಿ 12 ರವರೆಗೆ ಮದ್ಯ
ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್,
ರೆಸ್ಟೋರೆಂಟ್ ಮತ್ತು ವೈನ್ಶಾಪ್ಗಳಲ್ಲಿ ಮದ್ಯ
ಮಾರಾಟವನ್ನು ನಿಷೇಧಿಸಿ, ಜಿಲ್ಲಾಧಿಕಾರಿ ಕೂರ್ಮಾರಾವ್
ಎಂ ಆದೇಶಿಸಿರುತ್ತಾರೆ.