ಕರಾವಳಿ

ಬ್ರಹ್ಮಾವರ : 7 ನೇ ತರಗತಿಯ ಬಾಲಕ ನೇಣಿಗೆ ಶರಣು

ಬ್ರಹ್ಮವಾರ ಅ. 1:  ಏಳನೆ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಯೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಕಾಜ್ರಳ್ಳಿ ಜನತಾ ಕಾಲೋನಿ ಶಿರಿಯಾರದಲ್ಲಿ ಬುಧವಾರ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಕಾಜ್ರಳ್ಳಿ ಜನತಾ ಕಾಲೊನಿ ಶಿರಿಯಾರ ಗ್ರಾಮದ, ಬ್ರಹ್ಮಾವರ ತಾಲೂಕಿನ ವಿತಾ ಅವರ ಮಗ ತನುಷ್(12) ಎಂದು ಗುರುತಿಸ ಲಾಗಿದೆ. ತನುಷ್ 7 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕಲಿಯುವಿಕೆಯಲ್ಲಿ ಹಿಂದಿದ್ದು ಹೇಳಿದ ಮಾತನ್ನು ಕೇಳದೇ ಹಠಮಾರಿ ತನದಿಂದ ವರ್ತಿಸುತ್ತಿದ್ದು, ಈಗ ಆನ್ ಲೈನ್ ಕ್ಲಾಸ್ ನಡೆಯುತ್ತಿದ್ದು ಎಂದಿನಂತೆ ತಾಯಿ ಒಳ್ಳೆಯ ರೀತಿಯಲ್ಲಿ ಓದು ಎಂದು ಬುದ್ದಿ ಮಾತನ್ನು ಹೇಳಿ ತನ್ನ ಕೆಲಸಕ್ಕೆ ಹೋಗಿದರು. ತನುಷ್ ಹಳೆಯ ಮನೆಯ ಕೊಠಡಿಯಲ್ಲಿ ಸೀರೆಯನ್ನು ಪಕ್ಕಾಸಿಗೆ ಕಟ್ಟಿ, ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker