ರಾಜ್ಯ

ರಾಜ್ಯದಲ್ಲಿ ಜೂನ್ 14ಕ್ಕೆ ಮುನ್ನವೇ ಲಾಕ್ ಡೌನ್ ತೆರವು?: ನಾಳೆ ಕೋವಿಡ್ ಟಾಸ್ಕ್ ಫೋರ್ಸ್ ಸಭೆ

ಜೂನ್ 14ರ ವರೆಗೆ ಲಾಕ್ ಡೌನ್ ವಿಸ್ತರಣೆಯಾಗಿದ್ದರೂ ಅದಕ್ಕೆ ಮುನ್ನವೇ ಅನ್ ಲಾಕ್ ಆಗುವ ಸಾಧ್ಯತೆಯಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.

ಹಂತ ಹಂತವಾಗಿ ರಾಜ್ಯದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಮತ್ತೆ ಜೀವ ನೀಡಲು ಸಿದ್ದತೆ ನಡೆದಿದೆ. ಇದಕ್ಕೆ ಕಾರಣ ರಾಜ್ಯದಲ್ಲಿ ಇಳಿಮುಖವಾಗುತ್ತಿರುವ ಕೊರೊನಾ ಪ್ರಕರಣ. ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ರೇಟ್ ಶೇ.10ಕ್ಕಿಂತ ಕೆಳಗಿಳಿದಿದೆ. ಈ ನಿಟ್ಟಿನಲ್ಲಿ, 4-5 ದಿನಗಳಲ್ಲಿ ಸಚಿವರು, ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಕಡಿಮೆ ಸೋಂಕಿರುವ ಕಡೆ ಅನ್‍ಲಾಕ್ ಮಾಡುವ ಬಗ್ಗೆ ಸಮಾಲೋಚನೆ ನಡೆಸಲು ಯಡಿಯೂರಪ್ಪ ತಯಾರಿ ನಡೆಸಿದ್ದಾರೆ. ದೆಹಲಿ ಮತ್ತು ನೆರೆಯ ಮಹಾರಾಷ್ಟ್ರಗಳು ನಿಧಾನವಾಗಿ ಅನ್‍ಲಾಕ್ ಆಗುತ್ತಿರುವುದು ಮುಖ್ಯಮಂತ್ರಿಯವರಿಗೆ ಧೈರ್ಯ ನೀಡಿದೆ.

ಅನ್‍ಲಾಕ್ ಸಂಬಂಧ ನಾಳೆ(ಜೂನ್ 7) ಮಧ್ಯಾಹ್ನ 2:30ಕ್ಕೆ ಕೊವಿಡ್ ಟಾಸ್ಕ್ ಫೋರ್ಸ್ ಸಭೆ ನಡೆಯಲಿದೆ. ಜಿಲ್ಲಾವಾರು ಹಂತ ಹಂತವಾಗಿ ಅನ್‍ಲಾಕ್ ಮಾಡುವ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ನಂತರ ಸಿಎಂ ಸಂಪುಟ ಸಭೆ ನಡೆಸಿ ಮಹತ್ದದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ‘ರಿಪೋರ್ಟರ್ ಕರ್ನಾಟಕ’ಕ್ಕೆ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker