ರಾಷ್ಟ್ರೀಯ
ಅಪ್ಘಾನಿಸ್ತಾನದಿಂದ ಜನರನ್ನು ಏರ್ ಲಿಫ್ಟ್ ಮಾಡಿದ ಭಾರತ

ನವದೆಹಲಿ: ಅಪ್ಘಾನಿಸ್ತಾನದಿಂದ ಭಾರತ ೧೬೮ ಜನರನ್ನು ಏರ್ ಲಿಫ್ಟ್ ಮಾಡಿದೆ. ಇದರಲ್ಲಿ ೧೦೭ ಮಂದಿ ಭಾರತೀಯರಾಗಿದ್ದಾರೆ. ಉಳಿದವರು ಭಾರತದ ಮಿತ್ರ ದೇಶಗಳ ನಾಗರಿಕರಾಗಿದ್ದಾರೆ.
ಇದೀಗ ವಾಯುಪಡೆಯ ಸಿ- ೧೭ ವಿಮಾನ ಗಾಜಿಯಾಬಾದ್ ನಲ್ಲಿರುವ ಹಿಂಡನ್ ವಾಯುನೆಲೆಗೆ ಬಂದಿಳಿದಿದೆ.
ಪ್ರಯಾಣಿಕರನ್ನು ದೆಹೆಲಿಗೆ ಕರೆದೊಯ್ದ ಬಳಿಕ ಅವರನ್ನು ಅವರ ರಾಜ್ಯಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ.
ಪ್ರತಿದಿನ ಎರಡು ವಿಮಾನಗಳ ಹಾರಾಟಕ್ಕೆ ಭಾರತಕ್ಕೆ ಅನುಮತಿ ನೀಡಲಾಗಿದೆ.