ಕರಾವಳಿ
ವಿಶ್ವ ಆಂಟಿಮೈಕ್ರೋಬಿಯಲ್ ಜಾಗೃತಿ- ಸೈಕಲ್ ಜಾಥಾ

ಮಣಿಪಾಲ: ವಿಶ್ವ ಅಂಟಿಮೈಕ್ರೋಬಿಯಲ್ಜಾಗೃತಿ ಸಪ್ತಾಹ 2022ರ ಅಂಗವಾಗಿ ಭಾನುವಾರ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಸೈಕಲ್ ಜಾಥಾ ನಡೆಯಿತು.ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಹೊರರೋಗಿ ವಿಭಾಗದಮುಂಭಾಗದಲ್ಲಿ ಮಾಹೆ ಮಣಿಪಾಲದ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ.ವೆಂಕಟೇಶ್ ಅವರು ಚಾಲನೆ ನೀಡಿದರು.
ಮಹಾರಾಷ್ಟ್ರ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ನಾಶಿಕ್ ಇಲ್ಲಿನ ಉಪಕುಲಪತಿ ಲೆ. ಜ. (ಡಾ.) ಮಾಧುರಿ ಕಾನಿಟ್ಕರ್, ಕೆಎಂಸಿ ಡೀನ್ ಡಾ. ಶರತ್ ಕುಮಾರ್ ರಾವ್, ಸಹ ಡೀನ್ ಡಾ. ಚಿರೊಂಜೋಯ್ ಮುಖ್ಯಪಾಧ್ಯಾಯ್, ಡಾ.ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್, ಡಾ. ವಂದನಾ, ಡಾ. ಮುರಳಿಧರ್ ವರ್ಮ ಮತ್ತಿತರರು ಉಪಸ್ಥಿತರಿದ್ದರು.
ಜಾಥಾದಲ್ಲಿ 100 ಕ್ಕೂ ಹೆಚ್ಚು ಜನರು ಸೈಕಲ್ ನೊಂದಿಗೆ
ಭಾಗವಹಿಸಿದ್ದರು. ಕಸ್ತೂರ್ಬಾ ಆಸ್ಪತ್ರೆಯಿಂದ ಆರಂಭಗೊಂಡು ಡಾ.ಟಿಎಂಎ ಪೈ ಆಸ್ಪತ್ರೆ ಮೂಲಕ ಐಎಂಎ ಭವನ ತಲುಪಿತು.