ರಾಜ್ಯ
Trending

ಕುವೈಟ್ ನಲ್ಲಿ ಅಗ್ನಿ ಅವಘಡದಿಂದ ಕರಾವಳಿಯ ಯುವಕ ಮೃತ್ಯು!

ಮಂಗಳೂರು,:ಜೂ.16: ಕರಾವಳಿಯ ಯುವಕನೋರ್ವ ಅಗ್ನಿ ಅವಘಡದಲ್ಲಿ ಮೃತ ಪಟ್ಟ ಘಟನೆ ನಡೆದಿದೆ. ಪಡೀಲ್ ಕೊಡಕ್ಕಲ್ ನಿವಾಸಿಯಾಗಿರವ ಸತೀಶ್ ಕೋಚು ಶೆಟ್ಟಿ ಎಂಬುವವರು, ಕುವೈಟ್ ನಲ್ಲಿ ಆಯಿಲ್ ಗ್ಯಾಸ್ ನಲ್ಲಿ ಉಂಟಾದ ಅವಘಡದಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಕುವೈಟ್ ಆಯಿಲ್, ಗ್ಯಾಸ್ ಕಂಪೆನಿಯೊಂದರಲ್ಲಿ ಕರಾವಳಿಯ ಯುವಕ ಸತೀಶ್ ಉದ್ಯೋಗಿಯಾಗಿದ್ದರು. ರಾತ್ರಿ ಪಾಳಿಯಲ್ಲಿ ಅವರು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ವಿಷಕಾರಿ ಅನಿಲ ಬಿಡುಗಡೆಗೊಂಡು ಅಗ್ನಿ ಅವಘಡ ಸಂಭವಿಸಿದೆ. ಈ ವೇಳೆ ಸತೀಶ್ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬ ಸದಸ್ಯರು ಪ್ರತಿಕ್ರಿಯೆ ನೀಡಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker