ಕರ್ನಾಟಕದ 13 NGO ಸೇರಿದಂತೆ ದುಡ್ಡು ಮಾಡೋರಿಗೆ ಕೇಂದ್ರ ಸರ್ಕಾರದಿಂದ ‘ಬಿಗ್ ಶಾಕ್’

ನವದೆಹಲಿ : ಸಾರ್ವಜನಿಕ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದೇವೆಂದು ಹೇಳಿಕೊಳ್ಳುವ ಸರ್ಕಾರಿ ಅನುದಾನಿತ ಸಂಸ್ಥೆಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿಗಳು), ದೆಹಲಿ ವಿಶ್ವವಿದ್ಯಾಲಯ (ಡಿಯು) ಮತ್ತು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್ಎಸ್) ನಂತಹ ವಿದ್ಯಾರ್ಥಿಗಳು ನಡೆಸಿದ ಆಶ್ಚರ್ಯಕರ ತಪಾಸಣೆ ವೇಳೆ ಆಘಾತಕಾರಿ ಮಾಹಿತಿಗಳು ಸಿಕ್ಕಿವೆ ಎನ್ನಲಾಗಿದೆ.
ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಂಸ್ಥೆಯ (ಎನ್ಐಎಸ್ಡಿ) ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆಸಿದ ತಪಾಸಣೆಯ ನಂತರ ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯವು ಅಂತಹ 100 ಕ್ಕೂ ಎನ್ಜಿಒಗಳ ಮೇಲೆ ಹದ್ದಿನ ಕಣ್ಣು ಇಡುವುದಕ್ಕೆ ಶುರುಮಾಡಿದೆ.ಸಮೀಕ್ಷೆ ನಡೆಸಿದ ವೇಳೇಯಲ್ಲಿ 700 ಸಂಸ್ಥೆಗಳಲ್ಲಿ ಸುಮಾರು 130 ಅಥವಾ 19% ಕ್ರಿಯಾತ್ಮಕವಲ್ಲದವು, ಹಾಗೂ ನಿಯಂತ್ರಕ ಮಾನದಂಡಗಳನ್ನು ಉಲ್ಲಂಘಿಸಿವೆ, ದಾಖಲೆ ಗಳನ್ನು ಸರಿಯಾಗಿ ನಿರ್ವಹಿಸಲಿಲ್ಲ ಅಥವಾ ಅವರು ಬಯಸಿದ ಅಥವಾ ಪಡೆದ ಸರ್ಕಾರದ ಅನುದಾನವನ್ನು ಸರಿಯಾಗಿ ತಿಳಿಸಿಲ್ಲ ಅಂತ ತಿಳಿದು ಬಂದಿದೆ.ಸಾಮಾಜಿಕ ನ್ಯಾಯ ಸಚಿವಾಲಯವು ಈಗ ಸರ್ಕಾರದ ಹಣವನ್ನು ಪಡೆದ ಸುಮಾರು 130 ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಯೋಜಿಸುತ್ತಿದೆ ಹಾಗೂಈ ನಿಯಂತ್ರಕ ಮಾನದಂಡ ಗಳನ್ನು ಬಿಗಿಗೊಳಿಸುವುದಕ್ಕೆ ಮುಂದಾಗಿದೆ ಅಂಥ ತಿಳಿಸಿದೆ.
ರಾಜ್ಯವಾರು, ಮಹಾರಾಷ್ಟ್ರದಲ್ಲಿ 20 ಕ್ಕೂ ಹೆಚ್ಚು, ಕರ್ನಾಟಕದಲ್ಲಿ 13, ರಾಜಸ್ಥಾನದಲ್ಲಿ 11 ಮತ್ತು ಉತ್ತರಪ್ರದೇಶದಲ್ಲಿ ಎಂಟು ಸಂಸ್ಥೆಗಳು ಸಾಮಾಜಿಕ ನ್ಯಾಯ ಸಚಿವಾಲದ ಕಠಿಣಕ್ರಮವನ್ನು ಎದುರಿಸಲಿದ್ದಾವೆ ಎನ್ನಲಾಗಿದೆ