ಕರಾವಳಿ

ಸರ್ಕಾರ​ದ ​ವಿಶೇಷ ಪ್ಯಾಕೇಜ್‌ನಲ್ಲಿ​ ಸಣ್ಣ ಕೈಗಾರಿಕೆ ಪ್ರಿಂಟಿಂಗ್ ಪ್ರೆಸ್ ಮಾಲಕರಿಗೆ ಅನ್ಯಾಯ~ಎಮ್ ಮಹೇಶ್ ಕುಮಾರ್ ಮಲ್ಪೆ

ಸಣ್ಣ ಕೈಗಾರಿಕೆ ಯಾದ ಪ್ರಿಂಟಿಂಗ್ ಪ್ರೆಸ್ ಉದ್ಯಮ ಕೋವಿಡ್ ಎರಡನೇ ಅಲೆ ಪರಿಣಾಮ ಮಾಲೀಕರು, ಸೇರಿ ಸಾವಿರಾರು ಮಂದಿ ನೌಕರರು ಬೀದಿಗೆ ಬೀಳುವ ಪರಿಸ್ಥಿತಿಯಲ್ಲಿರುವಾಗ ಸರ್ಕಾರ​ದ ​ ವಿಶೇಷ ಪ್ಯಾಕೇಜ್‌ನಲ್ಲಿ ಪ್ರಿಂಟಿಂಗ್ ಪ್ರೆಸ್ ನ ಮಾಲಕರು ನೌಕರರು, ಪರಿಗಣಿಸದೇ ಅನ್ಯಾಯ ಮಾಡಿದೆ ಎಂದು ಉಡುಪಿ ಜಿಲ್ಲಾ ಮುದ್ರಣಾಲಯ ಗಳ ಮಾಲಕರ ಸಂಘದ ಅಧ್ಯಕ್ಷ ಎಮ್ ಮಹೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಸುಮಾರು 180 ಪ್ರಿಂಟಿಂಗ್ ಪ್ರೆಸ್ ಗಳಿದ್ದು 1200 ರ ವರೆಗೆ ನೌಕರ ರಿದ್ದು ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಉದ್ಯಮ ಮುಂದುವರಿಸುವುದು ಸವಾಲಾಗಿದೆ. ನಿರ್ವಹಣೆ, ಬ್ಯಾಂಕುಗಳ ಸಾಲ, ನೌಕರರ ಸಂಬಳಕ್ಕೆ ಸಂಬಂಧಿಸಿ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇನ್ನು ಮುಂದೆ ಉದ್ಯಮ ನಡೆಸಲು ಸಾಧ್ಯವಿಲ್ಲ.

ಮಾಲಕರ ಸಂಕಷ್ಟ ಕ್ಕೆ ಸೂಕ್ತ ವಾಗಿ ಸ್ಪಂದನೆ ನೀಡಿ ಸಾಲ ದ ಬಡ್ಡಿ ಯನ್ನು 6 ತಿಂಗಳ ವರೆಗೆ ಮನ್ನಾ ಮಾಡಿ ಸಾಲದ ಕಂತು 6 ತಿಂಗಳು ಮುಂದೂಡಬೇಕು ಸಾವಿರಾರು ನೌಕರರು ಕೆಲಸವಿಲ್ಲದೇ ಅತ್ರಂತ್ರರಾಗಿದ್ದು, ಅವರನ್ನು ಕಾರ್ಮಿಕರಂತೆ ಪರಿಗಣಿಸಿ ಸರ್ಕಾರ ಆರ್ಥಿಕ ಸಹಾಯಧನ ಮಾಡಬೇಕು. ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ​. ​​

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker